ಕರ್ನಾಟಕ

karnataka

ETV Bharat / city

ಕುಂದುಕೊರತೆ ಆಲಿಸಲು ಕುಂಟು ನೆಪ: ಬಿಬಿಎಂಪಿಯ ಮೂವರು ನೌಕರರು ಸಸ್ಪೆಂಡ್ - ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ

ಬಿಬಿಎಂಪಿಯ ಪೂರ್ವ ವಲಯದ ಸಿ.ವಿ.ರಾಮನ್ ನಗರ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯಪಾಲಕ ಅಭಿಯಂತರ ಬಿ.ಪ್ರಭಾಕರ್‌, ವ್ಯವಸ್ಥಾಪಕ ಕೆ.ಪಿ.ಸುರೇಶ್ ಕುಮಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್‌ ಅವರನ್ನು ಅಮಾನತುಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿ
ಬಿಬಿಎಂಪಿ

By

Published : Apr 1, 2022, 6:40 AM IST

ಬೆಂಗಳೂರು: ಪೌರ ಕಾರ್ಮಿಕರ ಕುಂದುಕೊರತೆ ಆಲಿಸುವಲ್ಲಿ ವಿಫಲರಾಗಿರುವ ಕಾರ್ಯಪಾಲಕ ಅಭಿಯಂತರ ಸೇರಿದಂತೆ ಮೂವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ ಗುಪ್ತ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಕಾರ್ಯಪಾಲಕ ಅಭಿಯಂತರ ಬಿ.ಪ್ರಭಾಕರ್‌, ವ್ಯವಸ್ಥಾಪಕ ಕೆ.ಪಿ.ಸುರೇಶ್ ಕುಮಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್‌ ಅಮಾನತಾದವರು. ಪೂರ್ವ ವಲಯದ ಸಿ.ವಿ.ರಾಮನ್ ನಗರ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಮೂವರು ಪೌರ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ನೂರಾರು ನೌಕರರು ಬಿಬಿಎಂಪಿ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಡಾ.ಬಾಬು ಅವರಿಗೆ ದೂರು ನೀಡಿದ್ದರು.

ಸಮಸ್ಯೆಗಳನ್ನು ಆಲಿಸದೆ ಕುಂಟು ನೆಪವೊಡ್ಡಿ ವೇತನ ಭತ್ಯೆ ಕಡತಗಳನ್ನು ವಿಲೇವಾರಿ ಮಾಡಿರಲಿಲ್ಲ. ಈ ಕುರಿತಂತೆ ಸಂಬಂಧಪಟ್ಟವರಿಗೆ ಬಾಬು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ಆಧಿಕಾರಿಗಳ ಧೋರಣೆಯ ವಿರುದ್ಧ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ದೂರು ನೀಡಲಾಗಿತ್ತು ಎಂದು ಬಾಬು ತಿಳಿಸಿದ್ದಾರೆ.

ಸತ್ಯಾಂಶ ತನಿಖೆಯಿಂದ ಪತ್ತೆ: ದೂರಿನಲ್ಲಿ ಸತ್ಯಾಂಶವಿರುವುದನ್ನು ಮನಗಂಡಿರುವ ಆಯುಕ್ತರು, ಮೂವರನ್ನು ಸೇವೆಯಿಂದ ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದಾರೆ. ಅಮಾನತಿನ ಸಂದರ್ಭದಲ್ಲಿ ಮೂವರು ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. 1958ರ ಕೆಸಿಎಸ್‌ಆರ್ ನಿಯಮ-98ರ ಅನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಅಕ್ರಮ ಡಿನೋಟಿಫಿಕೇಶನ್​ ಆರೋಪ ಪ್ರಕರಣ.. ಬಿಎಸ್​ವೈ ವಿರುದ್ಧ ಕ್ರಿಮಿನಲ್‌ ಕೇಸ್​ ದಾಖಲಿಸುವಂತೆ ಕೋರ್ಟ್​ ಆದೇಶ

ABOUT THE AUTHOR

...view details