ಕರ್ನಾಟಕ

karnataka

ETV Bharat / city

ಎನ್‌ಆರ್‌ಸಿ ಕೈ ಬಿಡುವ ಪ್ರಶ್ನೆಯೇ ಇಲ್ಲ.. ಗೃಹ ಸಚಿವ ಬಸವರಾಜ ಬೊಮ್ಮಾಯಿ - ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ

ಎನ್​ಆರ್​ಸಿ ನೀತಿಯನ್ನು ಭಾರತ ಸರ್ಕಾರ ನಿರ್ಧಾರ ಮಾಡುತ್ತದೆ. ನಾವು ಸದ್ಯಕ್ಕೆ ರಾಜ್ಯದಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ‌. ಆ ಮಾಹಿತಿಯನ್ನು ಕೇಂದ್ರದ ಗೃಹ ಸಚಿವರಿಗೆ ಕಳಿಸುತ್ತೇವೆ. ಎನ್​ಆರ್​ಸಿ ಪಟ್ಟಿಯನ್ನು ಕೈ ಬಿಡುವ ಪ್ರಶ್ನೆ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ

By

Published : Oct 22, 2019, 11:27 PM IST

ಬೆಂಗಳೂರು:ಎನ್​ಆರ್​ಸಿ ಪಟ್ಟಿಯನ್ನು(ರಾಷ್ಟ್ರೀಯ ಪೌರತ್ವ ನೋಂದಣಿ) ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ..

ವಿಧಾನಸೌಧದಲ್ಲಿ ಮಾತನಾಡಿದ ಅವರು, ಎನ್​ಆರ್​ಸಿ ನೀತಿಯನ್ನು ಭಾರತ ಸರ್ಕಾರ ನಿರ್ಧಾರ ಮಾಡುತ್ತದೆ. ನಾವು ಸದ್ಯಕ್ಕೆ ರಾಜ್ಯದಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ‌, ಆ ಮಾಹಿತಿಯನ್ನು ಕೇಂದ್ರದ ಗೃಹ ಸಚಿವರಿಗೆ ಕಳಿಸುತ್ತೇವೆ. ಗೃಹ ಸಚಿವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಯಾರನ್ನೂ ಬಂಧನ ಮಾಡಿಲ್ಲ:

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಯಾರನ್ನೂ ಬಂಧನ‌ ಮಾಡಿಲ್ಲ. ಎಲ್ಲಾ ಕಡೆ ವಿಚಾರ ಮಾಡುತ್ತಿದ್ದೇವೆ. ಆಂಧ್ರ ಹಾಗೂ ಮಹಾರಾಷ್ಟ್ರ ಪೊಲೀಸರ ಜೊತೆಗೆ ಮಾತಾಡುತ್ತಿದ್ದೇವೆ. ಎಲ್ಲಿಂದ ಪ್ರಾರಂಭ ಆಯ್ತು, ಅಲ್ಲಿಗೆ ಬಾಂಬ್ ಹೇಗೆ ಬಂತು ಎನ್ನುವುದು ತನಿಖೆ ಆಗುತ್ತಿದೆ ಎಂದು ವಿವರಿಸಿದರು.

For All Latest Updates

TAGGED:

ABOUT THE AUTHOR

...view details