ಕರ್ನಾಟಕ

karnataka

ETV Bharat / city

ಅಧಿಕ ಬೆಲೆಗೆ ದಿನಸಿ ಮಾರಾಟ: ಅಂಗಡಿ ಮುಚ್ಚಿಸಿದ ಪೊಲೀಸರು - Bangalore News

ದೇಶವೇ ಲಾಕ್​ಡೌನ್​ ಆದ ಪರಿಣಾಮ ಕೆಲವರು ಇದನ್ನೇ ಅವಕಾಶವೆಂಬಂತೆ ಹಣ ಮಾಡವ ದಂಧೆಯಲ್ಲಿ ತೊಡಗಿದ್ದಾರೆ.

Groceries at high prices. .. police closed the shop
ಅಧಿಕ ಬೆಲೆಗೆ ದಿನಸಿ ಮಾರಾಟ..ಅಂಗಡಿ ಮುಚ್ಚಿಸಿದ ಪೊಲೀಸರು

By

Published : Apr 2, 2020, 5:52 PM IST

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಅಂಗಡಿಯೊಂದರಲ್ಲಿ ನಿಗದಿತ ಬೆಲೆಗಿಂತ ದುಪ್ಪಟ್ಟು ಬೆಲೆಯಲ್ಲಿ ದಿನಸಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ಬಂದಿದ್ದನ್ನ ಆಧರಿಸಿ ದಾಳಿ ಮಾಡಿದ್ದಾರೆ.

ಅಂಗಡಿಯಲ್ಲಿ 35 ರೂಪಾಯಿ ಸಕ್ಕರೆಗೆ 55 ರೂ. ಬದಲು 72 ರೂ., ಅಡುಗೆ ಎಣ್ಣೆಗೆ 110 ರೂಪಾಯಿ ಹೀಗೆ ವಿವಿಧ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಮಾಹಿತಿ ಮೇರೆಗೆ ದಾಳಿ ನಡೆಸಿದ ಬ್ಯಾಡರಹಳ್ಳಿ ಇನ್ಸ್​ಪೆಕ್ಟರ್​ ರಾಜೀವ್ ಹಾಗೂ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಂಗಡಿ‌ ಮುಚ್ಚಿಸಿದ್ದಾರೆ.

ABOUT THE AUTHOR

...view details