ಬೆಂಗಳೂರು: 46 ಟಿಎಂಸಿ ನೀರು ಬಳಕೆಯ ಕಾವೇರಿಗೆ ವೆಲ್ಲಾರ್ ನದಿ, ಗುಂಡಾರ್ ನದಿ ಜೋಡಣೆ ಮಾಡುವ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ಮೇಕೆದಾಟು, ಕೆಆರ್ಎಸ್ ಹೈಲೆವೆಲ್ ಚಾನಲ್ ಮತ್ತು ಕಬಿನಿ ಹಿನ್ನೀರಿನಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಇಲ್ಲದೇ ಇದ್ದಲ್ಲಿ ಕಾವೇರಿ ಮೇಲಿನ ನದಿ ನೀರು ಬಳಕೆಯ ಹಕ್ಕನ್ನು ರಾಜ್ಯ ಸರ್ಕಾರ ಕಳೆದುಕೊಳ್ಳಲಿದೆ ಎಂದು ಜೆಡಿಎಸ್ನ ಶ್ರೀಕಂಠೇಗೌಡ ಆತಂಕ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಧ್ಯಾಹ್ನದ ಕಲಾಪದಲ್ಲಿ ನಿಯಮ 68 ರ ಅಡಿಯಲ್ಲಿ ತಮಿಳುನಾಡು ಸರ್ಕಾರ ಕಾವೇರಿ ನದಿ ಪಾತ್ರದಲ್ಲಿನ ಮಾಯನೂರು ಜಲಾಶಯವನ್ನು ಅಕ್ರಮವಾಗಿ ಬಳಸಿಕೊಂಡಿರುವ ಬಗ್ಗೆ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನೀರಾವರಿಯಲ್ಲಿ ಕೃಷ್ಣಾ ಮತ್ತು ಕಾವೇರಿ ರಾಜ್ಯದ ಎರಡು ಕಣ್ಣುಗಳು, ಕೃಷ್ಣಾ ತಹಬದಿಗೆ ಬಂದಿದೆ 519 ಮೀಟರ್ ಇರುವ ಜಲಾಶಯದ ಮಟ್ಟವನ್ನು ಮತ್ತೆ 5 ಮೀಟರ್ ಹೆಚ್ಚಳಕ್ಕೆ ಅನುಮತಿ ಸಿಕ್ಕಿದೆ ಅದನ್ನು ಬಳಸಿಕೊಳ್ಳಬೇಕಿದೆ. ಆದರೆ ಕಾವೇರಿ ವಿಚಾರ ಮಾತ್ರ ಭಿನ್ನವಾಗಿದೆ ಎಂದರು.
ಬ್ರಿಟಿಷರ ಕಾಲದಿಂದಲೇ ಕಾವೇರಿ ವಿವಾದ ಇದೆ, ಬ್ರಿಟೀಷರು ಮದ್ರಾಸ್ನ್ನು ಕೇಂದ್ರಾಡಳಿತ ಪ್ರದೇಶ ಮಾಡಿಕೊಂಡ ಕಾರಣ ಮೈಸೂರು ಅದರ ಅಧೀನದಲ್ಲಿ ಬರುವ ಕಾರಣ ಹೆಚ್ಚು ನೀರು ಅವರ ಪಾಲಾಗಿದೆ. ತಮಿಳುನಾಡನ್ನು ಕೇಳದ ಕರ್ನಾಟಕದಲ್ಲಿ ಯಾವುದೇ ಯೋಜನೆ ಮಾಡಲು ಸಾಧ್ಯವಿಲ್ಲದಂತಾಗಿದೆ. ವಾರ್ಷಿಕ 1571 ಸೆಂಟಿಮೀಟರ್ ಮಳೆ ಕರ್ನಾಟಕದಲ್ಲಿ, 1147 ಸೆಂಟಿಮೀಟರ್ ಮಳೆ ತಮಿಳುನಾಡಿನಲ್ಲಿ ಬೀಳುತ್ತಿದೆ. ಕರ್ನಾಟಕ 425 ಟಿಎಂಸಿ, ತಮಿಳುನಾಡು 205 ಟಿಎಂಸಿ ನೀರು ಮಳೆಯಿಂದ ಸಿಗಲಿದೆ.
ಈ ವಿವಾದ ಸುಪ್ರೀಂಕೋರ್ಟ್ಗೆ ಹೋದಾಗ ಕರ್ನಾಟಕ 284.75, ತಮಿಳುನಾಡು 404, ಕೇರಳ 30, ಪಾಂಡಿಚೇರಿ 7 ಟಿಎಂಸಿಗೆ ನೀರು ಹಂಚಿಕೆ ಮಾಡಲಾಗಿದೆ. ಕಾವೇರಿ ಜಲಾನಯನದ ಮೇಲುಸ್ತುವಾರಿ ನಿರ್ವಹಣಾ ಮಂಡಳಿ ನಿರ್ವಹಿಸಲಿದೆ. ನಾಲ್ಕೂ ರಾಜ್ಯದ ಪ್ರತಿನಿಧಿಗಳು, ಕೇಂದ್ರದ ಪ್ರತಿನಿಧಿ ಒಳಗೊಂಡ ಕೆಲಸ ಮಾಡಲು ಸೂಚಿಸಿದೆ. ಆದರೆ ಫೆಬ್ರವರಿಯಲ್ಲಿ ರಾಜ್ಯದ ಎನ್ಒಸಿ ಪಡೆಯದೆ ನಿರ್ವಹಣಾ ಮಂಡಳಿ ಸಭೆ ಗಮನಕ್ಕೂ ತಾರದೆ ತಮಿಳುನಾಡಿನವರು ಒಂದು ಯೋಜನೆಯ ಶಂಕುಸ್ಥಾಪನೆ ಮಾಡಿದ್ದಾರೆ ಎಂದು ಆರೋಪಿಸಿದರು.
14400 ಕೋಟಿ ವೆಚ್ಚದ ನದಿ ಜೋಡಣಾ ಯೋಜನೆ ಮಾಡಲಾಗುತ್ತಿದೆ. ಕಾವೇರಿಗೆ ವೆಲ್ಲಾರ್, ಗುಂಡಾರ್ ನದಿ ಜೋಡಣೆ ಮಾಡಲಿದ್ದು ಇದರಿಂದ 45 ಟಿಎಂಸಿ ಹೆಚ್ಚು ನೀರು ಬಳಸಿಕೊಳ್ಳಬಹುದಾಗಿದೆ.ಯಾರ ಅನುಮತಿ ಇಲ್ಲದೆ ನೂರಾರು ಎಕರೆಗೆ ಹೊಸದಾಗಿ ನೀರಾವರಿ ಕಲ್ಪಿಸುವ ಯೋಜನೆ ರೂಪಿಸುತ್ತಿದ್ದಾರೆ.118.45 ಕಿಲೋಮೀಟರ್ ಕಾಲುವೆ, 340 ಕೆರೆಗೆ ನೀರು, 42170 ಎಕರೆಗೆ ಖುಷ್ಕಿ ಭೂಮಿಗೆ ನೀರು ಹರಿಸುವ ಮೊದಲ ಹಂತದ ಯೋಜನೆಗೆ ಚಾಲನೆ ನೀಡಲಾಗಿದೆ. ಒಟ್ಟಾರೆಯಾಗಿ ಮೂರು ಹಂತದಲ್ಲಿ 1,09962 ಲಕ್ಷ ಎಕರಗೆ ನೀರು 1054 ಕರೆಗೆ ನೀರು ತುಂಬಿಸುವ ಯೋಜನೆ,14400 ಕೋಟಿ ವೆಚ್ಚದಲ್ಲಿ ಆರಂಭಿಸಿದ್ದ, 6948 ಕೋಟಿ ಹಣವನ್ನು ಮೊದಲ ಹಂತಕ್ಕೆ ಬಿಡುಗಡೆ ಮಾಡಲಾಗಿದೆ. ಸದ್ದಿಲ್ಲದೆ ಯೋಜನೆ ಕೈಗೆತ್ತಿಕೊಂಡಿದೆ ಎಂದು ದೂರಿದರು.
ರಾಜ್ಯದ ಹಕ್ಕು ಉಳಿಸಿಕೊಳ್ಳಲು ಮೂರು ಯೋಜನೆ