ಕರ್ನಾಟಕ

karnataka

By

Published : Feb 20, 2021, 3:14 PM IST

Updated : Feb 20, 2021, 4:12 PM IST

ETV Bharat / city

'ಸೂಪರ್ ಸಿಎಂ' ವಿಜಯೇಂದ್ರ.. 'ಡಮ್ಮಿ ಸಿಎಂ' ಬಿಎಸ್‌ವೈ.. ಇದು ಅಮಲಿನ ಕಮಲ.. ಕಾಂಗ್ರೆಸ್‌ ಟ್ವೀಟಾಸ್ತ್ರ

ರಾಜ್ಯ ಬಿಜೆಪಿ ಪಕ್ಷದ ಆಂದೋಲನ ಜೀವಿಗಳು ಪೆಟ್ರೋಲ್ ಬೆಲೆ 70 ರೂ. ಇದ್ದಾಗ, ಸೈಕಲ್ ಏರಿದ್ದರು. ಭಾರತ್ ಬಂದ್ ಮಾಡಿದ್ದರು. ರಸ್ತೆಯಲ್ಲಿ ಅಡುಗೆ ಮಾಡಿದ್ದರು. ರಸ್ತೆ ತಡೆ ನಡೆಸಿದ್ದರು. ಬೀದಿಯಲ್ಲಿ ಹೊರಳಾಡಿದ್ದರು. ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದರು. ಈಗ ಪೆಟ್ರೋಲ್ ಬೆಲೆ 100 ರೂ. ಆಗಿದೆ. ಈಗೆಲ್ಲಿ ಹೋದರು!?..

ಕಾಂಗ್ರೆಸ್
ಕಾಂಗ್ರೆಸ್

ಬೆಂಗಳೂರು :ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ವಿವಿಧ ವಿಚಾರಗಳನ್ನು ಮುಂದಿಟ್ಟು ಲೇವಡಿ ಮಾಡಿದೆ. ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ತನ್ನ ವ್ಯಂಗ್ಯ ಭರಿತ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಸೂಪರ್ ಸಿಎಂ' ಬಿ ವೈ ವಿಜಯೇಂದ್ರ 'ಡಮ್ಮಿ ಸಿಎಂ' ಬಿ ಎಸ್ ಯಡಿಯೂರಪ್ಪ ಎಂದು ಟ್ವೀಟ್​ ಮಾಡಿದೆ.

ಅಲ್ಲದೇ ವರ್ಗಾವಣೆ, ಗುತ್ತಿಗೆ, ಮಂತ್ರಿಗಿರಿ ಹಂಚಿಕೆ, ಖಾತೆ ಹಂಚಿಕೆ, ಅನುದಾನ ಬಿಡುಗಡೆ ಎಲ್ಲದರಲ್ಲೂ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ. ಅಭಿವೃದ್ಧಿ ಕಾರ್ಯ ಮಾಯವಾಗಿದೆ. ರಾಜ್ಯ ಬಿಜೆಪಿ ಪಕ್ಷದವರೇ ನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರ ಅಲ್ಲವೇ? ಎಂದು ಲೇವಡಿ ಮಾಡಿದೆ.

ಓದಿ..ರಾಜ್ಯದಲ್ಲಿ ಮತ್ತೊಮ್ಮೆ ಲಾಕ್​​​ಡೌನ್ ಇಲ್ಲ: ಸಚಿವ ಶ್ರೀಮಂತ ಪಾಟೀಲ್​ ಹೇಳಿಕೆ

ಅಮಲಿನ ಕಮಲ :ದೇಶದ ಉದ್ದಗಲದಲ್ಲಿ ಡ್ರಗ್ಸ್ ಜಾಲದಲ್ಲಿರುವುದೇ ಬಿಜೆಪಿ. ರಾಜ್ಯದಲ್ಲಿಯೂ ಬಿಜೆಪಿ ಸ್ಟಾರ್ ಪ್ರಚಾರಕರು ಡ್ರಗ್ಸ್ ನಂಟು ಹೊಂದಿದ್ದಾರೆ.

ದೇಶದೆಲ್ಲೆಡೆ ಮಾದಕ ದ್ರವ್ಯಗಳ ಜಾಲ ನಡೆಸುತ್ತಾ ಯುವ ಜನರ ಬದುಕನ್ನು ಮುಗಿಸುತ್ತಿದೆ 'ಅಮಲಿನ ಕಮಲ' ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಕಿಡಿಕಾರಿದೆ.

ಆಂದೋಲನ ಜೀವಿ :ರಾಜ್ಯ ಬಿಜೆಪಿ ಪಕ್ಷದ ಆಂದೋಲನ ಜೀವಿಗಳು ಪೆಟ್ರೋಲ್ ಬೆಲೆ 70 ರೂ. ಇದ್ದಾಗ, ಸೈಕಲ್ ಏರಿದ್ದರು. ಭಾರತ್ ಬಂದ್ ಮಾಡಿದ್ದರು. ರಸ್ತೆಯಲ್ಲಿ ಅಡುಗೆ ಮಾಡಿದ್ದರು. ರಸ್ತೆ ತಡೆ ನಡೆಸಿದ್ದರು.

ಬೀದಿಯಲ್ಲಿ ಹೊರಳಾಡಿದ್ದರು. ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದರು. ಈಗ ಪೆಟ್ರೋಲ್ ಬೆಲೆ 100 ರೂ. ಆಗಿದೆ. ಈಗೆಲ್ಲಿ ಹೋದರು!? ಎಂದು ಪ್ರಶ್ನಿಸಿದೆ.

Last Updated : Feb 20, 2021, 4:12 PM IST

ABOUT THE AUTHOR

...view details