ಬೆಂಗಳೂರು :ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ವಿವಿಧ ವಿಚಾರಗಳನ್ನು ಮುಂದಿಟ್ಟು ಲೇವಡಿ ಮಾಡಿದೆ. ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ತನ್ನ ವ್ಯಂಗ್ಯ ಭರಿತ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಸೂಪರ್ ಸಿಎಂ' ಬಿ ವೈ ವಿಜಯೇಂದ್ರ 'ಡಮ್ಮಿ ಸಿಎಂ' ಬಿ ಎಸ್ ಯಡಿಯೂರಪ್ಪ ಎಂದು ಟ್ವೀಟ್ ಮಾಡಿದೆ.
ಅಲ್ಲದೇ ವರ್ಗಾವಣೆ, ಗುತ್ತಿಗೆ, ಮಂತ್ರಿಗಿರಿ ಹಂಚಿಕೆ, ಖಾತೆ ಹಂಚಿಕೆ, ಅನುದಾನ ಬಿಡುಗಡೆ ಎಲ್ಲದರಲ್ಲೂ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ. ಅಭಿವೃದ್ಧಿ ಕಾರ್ಯ ಮಾಯವಾಗಿದೆ. ರಾಜ್ಯ ಬಿಜೆಪಿ ಪಕ್ಷದವರೇ ನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರ ಅಲ್ಲವೇ? ಎಂದು ಲೇವಡಿ ಮಾಡಿದೆ.
ಓದಿ..ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಇಲ್ಲ: ಸಚಿವ ಶ್ರೀಮಂತ ಪಾಟೀಲ್ ಹೇಳಿಕೆ