ಬೆಂಗಳೂರು:ಕೇಂದ್ರ ಸರ್ಕಾರದ ಬಜೆಟ್ ಮೇಲೆ ಜನರ ಅಪಾರ ನಿರೀಕ್ಷೆ ಇದ್ದು ಇದು ಈಡೇರುವುದೇ ಎಂದು ರಾಜ್ಯ ಕಾಂಗ್ರೆಸ್ 2020 ಬಜೆಟ್ ಕುರಿತು ಪ್ರಶ್ನೆ ಮಾಡಿದೆ.
ಕೇಂದ್ರ ಬಜೆಟ್ ಮೂಲಕ ಜನರ ಹಾಗೂ ದೇಶದ ಸಮಸ್ಯೆಯ ನಿವಾರಣೆ ಆಗುವುದೇ: ಕಾಂಗ್ರೆಸ್ - Central Budget 2020
ಕೇಂದ್ರ ವಿತ್ತ ಸಚಿವ ನಿರ್ಮಲ ಸೀತಾರಾಮನ್ ಅವರಿಗೆ ಟ್ವೀಟ್ ಮೂಲಕ ಪ್ರಶ್ನೆ ಹಾಕಿರುವ ರಾಜ್ಯ ಕಾಂಗ್ರೆಸ್ ಪಕ್ಷ, ಈ ಬಜೆಟ್ ದೇಶದ ಎಲ್ಲ ಕುಂದು ಕೊರತೆಗಳನ್ನು ಸರಿ ಮಾಡಬಲ್ಲುದೆ? ಎಂದು ಕೇಳಿದ್ದಾರೆ.
ಟ್ವೀಟ್ ಮೂಲಕ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಹಾಕಿರುವ ರಾಜ್ಯ ಕಾಂಗ್ರೆಸ್ ಪಕ್ಷ, 45 ವರ್ಷಗಳಲ್ಲೇ ನಿರುದ್ಯೋಗ ಪ್ರಮಾಣವು ಹೆಚ್ಚಾಗಿದೆ, 40 ವರ್ಷಗಳಲ್ಲೇ ಗ್ರಾಮೀಣ ಭಾರತದ ಕೊಳ್ಳುವ ಶಕ್ತಿ ಕುಂದಿದೆ, ರೈತರ ಆದಾಯ, ಹೂಡಿಕೆ, ಬೇಡಿಕೆ, ಕೈಗಾರಿಕಾ ಉತ್ಪಾದನೆ, ರಫ್ತು ಕುಂಠಿತಗೊಳ್ಳುವ ಜತೆಗೆ ಜಿಡಿಪಿ ಕುಸಿದಿದೆ ಎಂದು ತಿಳಿಸಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ, ಈ ಬಜೆಟ್ ಇವೆಲ್ಲವನ್ನು ಸರಿ ಮಾಡಬಲ್ಲುದೆ? ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಪಕ್ಷ ಹಾಕಿದೆ. ಕೇಂದ್ರ ಬಜೆಟ್ ಸಾಕಷ್ಟು ಕುತೂಹಲಗಳನ್ನು ಮೂಡಿಸಿದ್ದು, ಸಹಜವಾಗಿ ಪ್ರಮುಖ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ತನ್ನ ಪ್ರಶ್ನೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.