ಬೆಂಗಳೂರು:ಇಂದಿನಿಂದ ಮೂರು ದಿನಗಳ ಕಾಲ ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ನಲ್ಲಿ ಮಲ್ಲೇಶ್ವರಂನ ನಿರಂತರಂ ಹಾಗೂ ಸಂಗೀತ ಸಂಭ್ರಮ ಟ್ರಸ್ಟ್ ಆಯೋಜಿಸಿರುವ ಶ್ರೀರಾಮ ಯಾನ ಕಾರ್ಯಕ್ರಮಕ್ಕೆ ಹಿರಿಯ ರಂಗಕರ್ಮಿ ನಾಗಾಭರಣ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ, ಹಿರಿಯ ರಂಗಕರ್ಮಿ ನಾಗಾಭರಣ ಮಾತನಾಡಿ, ಮನುಷ್ಯನ ಮೂಲ ವ್ಯವಸ್ಥೆಯಲ್ಲಿ ಅವನ ಅಳಿವು - ಉಳಿವು ಇರೋದು ನಮ್ಮ ಪರಿಸರದಲ್ಲಿ. ನಾವು ಉಳಿಬೇಕು ಅಂದ್ರೆ ಸಸ್ಯಸಂಕುಲ ಉಳಿಯಬೇಕು. ಸಸ್ಯ ಸಂಕುಲ ಉಳಿಯಬೇಕು ಅಂದ್ರೆ ನಾವು ಹೆಚ್ಚು ಗಿಡಗಳನ್ನ ನೆಡಬೇಕು. ನಮ್ಮ ಭಾರತೀಯ ಸಂಸ್ಕೃತಿದಲ್ಲಿ ಗಿಡಮರಗಳನ್ನ ದೇವರೆಂದು ಪೂಜಿಸುತ್ತೇವೆ. ಈ ಪದ್ಧತಿ ಬಂದಿದ್ದು, ನಮ್ಮ ರಾಮಾಯಣ ಹಾಗೂ ಮಹಾಭಾರತದಿಂದ. ರಾಮಾಯಣದಲ್ಲಿ ಬರುವಂತಹ ಅಶೋಕವನವನ್ನ ನಿರ್ಮಿಸಿದ ಹಾಗೆ ಶ್ರೀರಾಮ ಯಾನ ನಡಿಗೆಯಲ್ಲಿ ಗಿಡಗಳನ್ನ ನಡಲಾಗುತ್ತಿದೆ. ಇದೊಂದು ಒಳ್ಳೆಯ ಕಾರ್ಯ. ಈ ಶಾಲಾ ಆವರಣ ಅಶೋಕ, ಶಬರಿವನವಾಗಲಿ ಅಂತ ಆಶಿಸುತ್ತೇನೆ ಎಂದರು.