ಬೆಂಗಳೂರು : ಸಾರ್ವಜನಿಕರ ಅನುಕೂಲಕ್ಕಾಗಿ ಕ್ರಿಸ್ಮಸ್ ಮತ್ತು ಶಬರಿಮಲೆ ಪೂಜೆ ಹೋಗುವ ಪ್ರಯಾಣಿಕರಿಗೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ರೈಲ್ವೇ ನಿಲ್ದಾಣ ಬೆಂಗಳೂರಿನಿಂದ ಎರ್ನಾಕುಲಂ - ಕೃಷ್ಣರಾಜಪುರಂ ಸ್ಪೆಷಲ್ ಎಕ್ಸ್ಪ್ರೆಸ್ ವಿಶೇಷ ಶುಲ್ಕದಲ್ಲಿ ನಿಯೋಜಿಸಲಾಗಿದೆ. ರೈಲು ಸಂಖ್ಯೆ 06547 ಬೆಂಗಳೂರು - ಎರ್ನಾಕುಲಂ ಸ್ಪೆಷಲ್ ಎಕ್ಸ್ಪ್ರೆಸ್ 28 ರಂದು ಸಂಜೆ 6:45 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 06:00 ಗಂಟೆಗೆ ಎರ್ನಾಕುಲಂ ತಲುಪುತ್ತದೆ. ನಂತರ ಎರ್ನಾಕುಲಂ - ಕೃಷ್ಣರಾಜಪುರಂ ಸ್ಪೆಷಲ್ ಎಕ್ಸ್ಪ್ರೆಸ್ 29 ರಂದು ಸಂಜೆ 7 ಗಂಟೆಗೆ ಎರ್ನಾಕುಲಂನಿಂದ ಹೊರಟು ಮರುದಿನ ಬೆಳಗ್ಗೆ 6:50 ಗಂಟೆಗೆ ಕೃಷ್ಣರಾಜಪುರಂ ತಲುಪಲಿದೆ.