ಬೆಂಗಳೂರು: ನಮ್ಮದು ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ. ಯಾರು ಪಕ್ಷ ಬದಲು ಮಾಡಿರುತ್ತಾರೋ ಅವರು ಮಾತ್ರ ಇದು ಮೂರು ಪಕ್ಷದ ಸರ್ಕಾರ ಎಂದು ಹೇಳಲು ಸಾಧ್ಯ ಎಂದು ಸಚಿವ ಸಿ.ಪಿ.ಯೋಗೇಶ್ವರ್ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದ್ದಾರೆ.
ತಾವರೆಕೆರೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಪಕ್ಷಗಳ ಸರ್ಕಾರ ಎಂದು ಸಚಿವ ಯೋಗೇಶ್ವರ್ ಹೇಳಿದ್ದಾರೆ. ಯಾರೇ ಆಗಲಿ ಮೂರು ಪಕ್ಷ ಅಂತಾ ಹೇಳಲು ಹೋಗಬಾರದು. ಯಾರು ಪಕ್ಷ ಬದಲು ಮಾಡಿರುತ್ತಾರೋ ಅವರು ಮಾತ್ರ ಈ ರೀತಿ ಹೇಳಲು ಸಾಧ್ಯ. ಯಾವ ಆಧಾರದಲ್ಲಿ ಹೇಳುತ್ತಾರೋ ಗೊತ್ತಿಲ್ಲ. ಇವರು ಬಿಜೆಪಿ ಸಚಿವರು, ಪಕ್ಷಕ್ಕೆ ಸೀಮಿತ ಇರಬೇಕಾಗುತ್ತದೆ ಎಂದರು.
ಪ್ರತಿಪಕ್ಷಗಳ ಕೆಲ ಸಲಹೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕಾಗುತ್ತದೆ. ಪ್ರತಿಪಕ್ಷಗಳು ಕೆಲವು ಸಲ ಸಲಹೆ ಕೊಡುತ್ತೆ. ಕೆಲವು ಸಲ ಕೆಲ ತೊಂದರೆ ಆಗುತ್ತದೆ ಅಂತಾ ಸಿಎಂ ಗಮನಕ್ಕೆ ತರುತ್ತಾರೆ. ಪ್ರತಿಪಕ್ಷ ನಾಯಕರಿಗೂ ಕೂಡ ಸಿಎಂ ಮನ್ನಣೆ ಕೊಡುವಂತಹದ್ದು ಇದೆ. ಕುಮಾರಸ್ವಾಮಿ ಹಲವು ಸಲಹೆಗಳನ್ನು ಕೊಡ್ತಾರೆ, ಒಳ್ಳೆಯದೂ ಕೂಡ ಕೊಡ್ತಾರೆ. ಸಿಎಂ ಅದರ ಕಡೆ ಗಮನ ಕೂಡ ಕೊಡ್ತಾರೆ. ಅಷ್ಟಕ್ಕೇ ಅವರು ಸಚಿವರಾಗಿದ್ದುಕೊಂಡೂ ಕೂಡ ಮೂರು ಪಕ್ಷದ ಸರ್ಕಾರ ಅಂತಾ ಹೇಳೋದು ಸರಿಯಲ್ಲ ಎಂದಿದ್ದಾರೆ.