ಕರ್ನಾಟಕ

karnataka

ETV Bharat / city

ಸಾಮ್ರಾಟ್ ಜ್ಯುವೆಲ್ಲರ್ಸ್ ದರೋಡೆ ಯತ್ನ ಪ್ರಕರಣದ ಆರನೇ ಆರೋಪಿ ಅರೆಸ್ಟ್.. - ವೈಯಾಲಿಕಾವಲ್ ಪೊಲೀಸರು

ಸಾಮ್ರಾಟ್ ಜ್ಯುವೆಲ್ಲರ್ಸ್ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಶಂಕರ್​ನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

ಸಾಮ್ರಾಟ್ ಜ್ಯುವೆಲ್ಲರ್ಸ್

By

Published : Aug 31, 2019, 8:47 PM IST

ಬೆಂಗಳೂರು: ಸಾಮ್ರಾಟ್ ಜ್ಯುವೆಲ್ಲರ್ಸ್ ದರೋಡೆ ಯತ್ನ ಪ್ರಕರಣ ಸಂಬಂಧ ವೈಯಾಲಿಕಾವಲ್ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಚಿನ್ನದ ವ್ಯಾಪಾರಿ ಶಂಕರ್ ಎಂಬಾತ ಬಂಧಿತ ಆರೋಪಿ.

ಚಿಕ್ಕಪೇಟೆ ನಿವಾಸಿಯಾಗಿರುವ ಶಂಕರ್​, ಸಾಮ್ರಾಟ್‌ ಜ್ಯುವೆಲ್ಲರ್ಸ್ ದರೋಡೆ ಯತ್ನ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಬಾಲಾಜಿ ಗಾಯಕ್ವಾಡ್ ಸಂಬಂಧಿಯಾಗಿದ್ದಾನೆ. ವ್ಯಾಪಾರದಲ್ಲಿ ಶಂಕರ್​ಗೆ ನಷ್ಟವಾಗಿದ್ದರಿಂದ ಸಾಲ ಜಾಸ್ತಿಯಾಗಿತ್ತು. ಹೇಗಾದರೂ ಹಣ ಸಂಪಾದನೆ‌ಗಾಗಿ ಡರೋಡೆಗೆ ಪ್ಲ್ಯಾನ್ ರೂಪಿಸಿದ್ದ. ಇದಕ್ಕೆ ಪರಿಚಿತ ಪ್ರಹ್ಲಾದ್ ಚೌಧರಿ ಕೈ ಜೋಡಿಸಿದ್ದ. ಈ ಇಬ್ಬರು ದರೋಡೆ ಯಶಸ್ಸುಗೊಳಿಸುವ ಜವಾಬ್ದಾರಿಯನ್ನು ಆರೋಪಿ ಬಾಲಾಜಿ ಗಾಯಕ್ವಾಡ್​ಗೆ ವಹಿಸಿದ್ದರು.

ಈ ಹಿಂದೆ ಬಾಲಾಜಿ ಮಹಾರಾಷ್ಟ್ರದ ಸತಾರ್‌ದಲ್ಲಿಯೂ 20 ಲಕ್ಷ ದರೋಡೆ ಪ್ರಕರಣದಲ್ಲಿ ತಪ್ಪಿಸಿಕೊಂಡು, ಬೆಂಗಳೂರಿನಲ್ಲಿ ಅವಿತುಕೊಂಡಿದ್ದ. ಸದ್ಯ ‌ಸಾಮ್ರಾಟ್ ಜುವೆಲ್ಲರಿ ದರೋಡೆ ಯತ್ನ ಪ್ರಕರಣದಲ್ಲಿ ಶಂಕರ್ ಸೇರಿ ಈವರೆಗೂ ಬಾಲಾಜಿ ಗಾಯಕ್ವಾಡ್, ಜೆ.ಬಲವಾನ್ ಸಿಂಗ್, ಶ್ರೀರಾಮ್ ಬಿಷ್ನೋಯಿ, ಜೆ. ಓಂಪ್ರಕಾಶ್ ಸಿಂಗ್, ಪ್ರಹ್ಲಾದ್ ಚೌಧರಿ ಆರು ಆರೋಪಿಗಳನ್ನು ಬಂಧಿಸಲಾಗಿದೆ.

ABOUT THE AUTHOR

...view details