ಕರ್ನಾಟಕ

karnataka

ETV Bharat / city

ಸಿಎಂ ಕಚೇರಿಗೆ ಸಣ್ಣ ಸರ್ಜರಿ: ಮುಖ್ಯಮಂತ್ರಿ ಕಾರ್ಯದರ್ಶಿ ಕಳಸದ್ ಎತ್ತಂಗಡಿ, ಆ ಹುದ್ದೆಗೆ ಸೆಲ್ವಕುಮಾರ್ ನಿಯೋಜನೆ - ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಡಾ. ಎಸ್. ಸೆಲ್ವಕುಮಾರ್​ ನೇಮಕ

ಸಿಎಂ ಯಡಿಯೂರಪ್ಪ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಡಾ. ಎಸ್. ಸೆಲ್ವಕುಮಾರ್​ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ‌ ಮಾಡಲಾಗಿದ್ದರೆ, ಆ ಹುದ್ದೆಯಲ್ಲಿದ್ದ ಶಿವಯೋಗಿ ಕಳಸದ್​ ಅವರನ್ನ ಅಲ್ಲಿಂದ ಎತ್ತಂಗಡಿ ಮಾಡಲಾಗಿದೆ.

ಶಿವಯೋಗಿ ಕಳಸದ್​​

By

Published : Oct 19, 2019, 8:51 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಮ್ಮ ಸಚಿವಾಲಯದಲ್ಲಿ ಸಣ್ಣ ಸರ್ಜರಿ ಮಾಡಿಸಿದ್ದಾರೆ.

ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಎಂ ಸೂಚನೆ

ಡಾ. ಎಸ್. ಸೆಲ್ವಕುಮಾರ್​ರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾವಣೆ‌ ಮಾಡಲಾಗಿದ್ದರೆ, ಆ ಹುದ್ದೆಯಲ್ಲಿದ್ದ ಶಿವಯೋಗಿ ಕಳಸದ್​​ರನ್ನು ಎತ್ತಂಗಡಿ ಮಾಡಲಾಗಿದೆ. ಇನ್ನು ಡಾ. ವಿಶಾಲ್​ರನ್ನು ಮುಖ್ಯಮಂತ್ರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಸಿಎಂ ಸಚಿವಾಲಯವನ್ನು ಪ್ರಧಾನ‌ಮಂತ್ರಿ ಕಚೇರಿ ರೀತಿಯಲ್ಲೇ ಆಡಳಿತ ವ್ಯವಸ್ಥೆಯನ್ನು ಉನ್ನತೀಕರಿಸಲು ಯಡಿಯೂರಪ್ಪ ಸೂಚನೆ ನೀಡಿದ್ದು, ಈ ಸಂಬಂಧ ಕೆಲ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details