ಕರ್ನಾಟಕ

karnataka

ETV Bharat / city

ಪಿಕಪ್, ಡ್ರಾಪ್ ಮಾಡುವ ನೆಪದಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್​​ - Bangalore crime news

ಪಿಕ್ ಅಪ್ ಆ್ಯಂಡ್​​ ಡ್ರಾಪ್ ನೆಪದಲ್ಲಿ ದರೋಡೆ ಮಾಡುತ್ತಿದ್ದ ಬಾಲಾಪರಾಧಿ ಸೇರಿ ನಾಲ್ವರು ಆರೋಪಿಗಳ‌ನ್ನ ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

Gang arrest, who was robbing

By

Published : Nov 11, 2019, 9:20 PM IST

ಬೆಂಗಳೂರು:ಪಿಕ್ ಅಪ್ ಆ್ಯಂಡ್​​ ಡ್ರಾಪ್ ನೆಪದಲ್ಲಿ ದರೋಡೆ ಮಾಡುತ್ತಿದ್ದ ಬಾಲಾಪರಾಧಿ ಸೇರಿ ನಾಲ್ವರು ಆರೋಪಿಗಳ‌ನ್ನ ಬಂಧಿಸುವಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರು ಚಾಲಕರಾದ ಸಂದೀಪ್, ಅನುಕುಮಾರ್,ಮನುಕುಮಾರ್, ಒಬ್ಬ ಬಾಲಾಪರಾಧಿ ಬಂಧಿತರು. ನವೆಂಬರ್​ 4ರಂದು ನಾಗರಬಾವಿಯ ಗಂಗಾಧರಯ್ಯ ಅವರನ್ನು ಗೊರಗುಂಟೆಪಾಳ್ಯದಲ್ಲಿ ಹತ್ತಿಸಿಕೊಂಡು ನಗರಾದ್ಯಂತ ಸುತ್ತಾಡಿಸಿ ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್, ಉಂಗುರ, ಎಟಿಎಂ ಕಾರ್ಡ್​, ನಗದು ₹ 500 ಕಸಿದುಕೊಂಡು ಪರಾರಿಯಾಗಿದ್ದರು.

ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್​​

ಗ್ಯಾಂಗ್​ ತಮ್ಮ ಟಿಟಿ ವಾಹನದಲ್ಲಿ ನಾಗರಬಾವಿ, ಹೊಸಕೆರೆಹಳ್ಳಿ, ಆರ್.ಆರ್.ನಗರ ಸುತ್ತಾಡಿಸಿ ಹಲ್ಲೆ ಮಾಡಿ ಆರ್.ಆರ್.ನಗರದ ದ್ವಾರದ ಗಾಡಿಯಿಂದ ತಳ್ಳಿದರು. ಗಂಭೀರ ಗಾಯದಿಂದ ಗಂಗಾಧರಯ್ಯ ಸ್ಥಳೀಯರ ನೆರವಿನೊಂದಿಗೆ ಮನೆ ಸೇರಿದ್ದರು. ದರೋಡೆ ಬಗ್ಗೆ ಆರ್​ಆರ್​​ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

ಕಾರ್ಯ ಪ್ರವೃತ್ತರಾದ ರಾಜರಾಜೇಶ್ವರಿ ನಗರ ಇನ್​​ಸ್ಪೆಕ್ಟರ್ ನವೀನ್ ಮತ್ತು ತಂಡ ಹಣ ಡ್ರಾ ಮಾಡಿದ್ದ ಎಟಿಎಂ ಸಿಸಿ.ಟಿ.ವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧಾರದ ಮೇಲೆ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ. ದರೋಡೆ ಮಾಡಿದ್ದ ವಸ್ತುಗಳನ್ನು ಮಾಲೀಕ‌ ಗಂಗಾಧರಯ್ಯ ಅವರಿಗೆ ತಲುಪಿಸಿದ್ದಾರೆ

ABOUT THE AUTHOR

...view details