ಕರ್ನಾಟಕ

karnataka

By

Published : Dec 4, 2019, 12:51 PM IST

ETV Bharat / city

ಆಪ್ತರ ಮುಂದೆ ಗಳಗಳನೇ ಅತ್ತ ಕೈ ಅಭ್ಯರ್ಥಿ: ರಿಜ್ವಾನ್ ಕಣ್ಣೀರಿಗೆ ಕಾರಣ?!

ಶಿವಾಜಿನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಂಗಳವಾರ ರಾತ್ರಿ ಗಳಗಳನೇ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

ಆಪ್ತರ ಮುಂದೆ ಅತ್ತ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್
ಆಪ್ತರ ಮುಂದೆ ಅತ್ತ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್

ಬೆಂಗಳೂರು: ಶಿವಾಜಿನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಿನ್ನೆ ರಾತ್ರಿ ಗಳಗಳನೇ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

ಆಪ್ತರ ಮುಂದೆ ಅತ್ತ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್

ಉಪಚುನಾವಣೆಯಲ್ಲಿ ಪಕ್ಷದ ನಾಯಕರು ಪ್ರಚಾರಕ್ಕೆ ಬರದೇ ಕೈಕೊಟ್ಟ ಕಾರಣದಿಂದ ಕಂಗೆಟ್ಟಿರುವ ರಿಜ್ವಾನ್ ಅರ್ಷದ್​ಗೆ ಈ ಇನ್ನೊಂದು ಆಘಾತ ಉಂಟಾಗಿದೆ. ಸಂಪಂಗಿ ರಾಮನಗರ ವಾರ್ಡ್ ಬಿಬಿಎಂಪಿ ಸದಸ್ಯ ಸಂಪತ್​ಕುಮಾರ್ ಕಾಂಗ್ರೆಸ್ ಬಿಟ್ಟು ಮಂಗಳವಾರ ಬಿಜೆಪಿ ಸೇರಿದ್ದಾರೆ. ನಿನ್ನೆ ಮೊನ್ನೆಯವರೆಗೂ ರಿಜ್ವಾನ್ ಜತೆಯಲ್ಲೇ ಇದ್ದು, ಚುನಾವಣೆ ಪ್ರಚಾರಕ್ಕೆ ಅಗತ್ಯಬೀಳುತ್ತದೆ ಎಂದು ಸಾಕಷ್ಟು ಹಣವನ್ನೂ ಪಡೆದು ಸಂಪತ್​ಕುಮಾರ್ ಕೈಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಸೇರಿದ ಬಿಬಿಎಂಪಿ ಸದಸ್ಯ ಸಂಪತ್​ಕುಮಾರ್

ಆಪ್ತನಂತೆ ಜತೆಯಲ್ಲಿದ್ದು, ಕೈಕೊಟ್ಟಿದ್ದರಿಂದ ಆಘಾತಕ್ಕೊಳಗಾಗಿರುವ ರಿಜ್ವಾನ್ ತಮ್ಮ ಆಪ್ತರ ಸಮ್ಮುಖದಲ್ಲಿ ನಿನ್ನೆ ಸಂಜೆ ಗಳಗಳನೇ ಅತ್ತಿದ್ದಾರೆ ಎನ್ನಲಾಗ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿ ಸೇರಿದ್ದೇನೆ ಎಂದು ಸಂಪತ್​​ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಉಪಚುನಾವಣೆ ಮತದಾನಕ್ಕೆ ಎರಡು ದಿನ ಮುನ್ನ ಈ ರೀತಿ ಆಪ್ತನಂತೆ ಗುರುತಿಸಿಕೊಂಡಿದ್ದ ಕಾರ್ಪೊರೇಟರ್ ಕೈಕೊಟ್ಟಿದ್ದು ರಿಜ್ವಾನ್​ಗೆ ಗರ ಬಡಿದಂತಾಗಿದೆ.

ಕಡೆಯ ಕ್ಷಣದಲ್ಲಿ ನಂಬಿದವರು ಕೈಕೊಟ್ಟಿರುವುದು ರಿಜ್ವಾನ್​ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹಾಗಾಗಿ ಇದು ಈಗ ಕಣ್ಣೀರಿನ ರೂಪದಲ್ಲಿ ಆಚೆ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ABOUT THE AUTHOR

...view details