ಕರ್ನಾಟಕ

karnataka

By

Published : May 16, 2019, 8:21 PM IST

ETV Bharat / city

ಮನೆ ಬಾಡಿಗೆ ಹಣ ಬಾಕಿ ಪ್ರಕರಣ...ತಂದೆಯೊಂದಿಗೆ ಠಾಣೆಗೆ ಹಾಜರಾದ ನಟ ಆದಿತ್ಯಾ

ನಟ ಆದಿತ್ಯಾ ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರಂತೆ. ಗೂಂಡಾಗಳನ್ನು ಕರೆಸಿ ಮನೆ ಮಾಲೀಕರ ಮೇಲೆ ಗಲಾಟೆ ಮಾಡಿಸಿಲ್ಲ. ಈ ಬಗ್ಗೆ ಕಾನೂನು ಹೋರಾಟ​ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಆದಿತ್ಯಾ

ಬೆಂಗಳೂರು: ಮನೆ ಬಾಡಿಗೆ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಆದಿತ್ಯ ಹಾಗೂ ಅವರ ತಂದೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪೊಲೀಸ್​ ಎದುರು ಹಾಜರಾಗಿದ್ದಾರೆ. ಇಂದು ಸದಾಶಿವನಗರ ಠಾಣೆಗೆ ಆಗಮಿಸಿ ತನಿಖಾಧಾಕಾರಿ ಎದುರು ವಿಚಾರಣೆಗೊಳಪಟ್ಟಿದ್ದಾರೆ.

ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರಂತೆ. ಗೂಂಡಾಗಳನ್ನು ಕರೆಸಿ ಮನೆ ಮಾಲೀಕರ ಮೇಲೆ ಗಲಾಟೆ ಮಾಡಿಸಿಲ್ಲ. ಈ ಬಗ್ಗೆ ಕಾನೂನು ಹೋರಾಟ​ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ನಟ ಆದಿತ್ಯಾ ಕುಟುಂಬದ ವಿರುದ್ಧ ಮನೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಆರೋಪ ಕೇಳಿ ಬಂದಿತ್ತು. 7 ತಿಂಗಳಿನಿಂದ 2.88 ಲಕ್ಷ ಬಾಡಿಗೆ ಉಳಿಸಿಕೊಂಡಿದ್ದಾರೆ. ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನೆಡೆಸಿದ್ದಾರೆ ಅಂತಾ ಮನೆ ಮಾಲೀಕ ಪ್ರಸನ್ನ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

For All Latest Updates

TAGGED:

ABOUT THE AUTHOR

...view details