ಕರ್ನಾಟಕ

karnataka

ರಮೇಶ್ ಆತ್ಮಹತ್ಯೆ ಪ್ರಕರಣ... ವಿಚಾರಣೆಗೆ ಸಹಕರಿಸಲು ಕಾಲಾವಕಾಶ ಕೇಳಿದ ಐಟಿ

By

Published : Nov 4, 2019, 11:51 PM IST

ಮಾಜಿ ಡಿಸಿಎಂ‌‌ ಡಾ. ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ಹೊರಡಿಸಿದ್ದ ನೋಟಿಸ್​ಗೆ ಐಟಿ ಅಧಿಕಾರಿಗಳು ಉತ್ತರಿಸಿದ್ದು, ಅದಕ್ಕೆ ಸಮಯಾವಕಾಶ ನೀಡುವಂತೆ ಹೇಳಿದ್ದಾರೆ.

Ramesh suicide case

ಬೆಂಗಳೂರು: ಮಾಜಿ ಡಿಸಿಎಂ‌‌ ಡಾ. ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ಹೊರಡಿಸಿದ್ದ ನೋಟಿಸ್​ಗೆ ಐಟಿ ಅಧಿಕಾರಿಗಳು ಉತ್ತರಿಸಿದ್ದು, ಅದಕ್ಕೆ ಸಮಯಾವಕಾಶ ನೀಡುವಂತೆ ಕೇಳಿದ್ದಾರೆ.

ರಮೇಶ್ ಬರೆದಿಟ್ಟ ಡೆತ್​​ನೋಟ್ ಹಾಗೂ ಕುಟುಂಬಸ್ಥರ ಆರೋಪಕ್ಕೆ ಉತ್ತರಿಸುವಂತೆ ಐಟಿ ಅಧಿಕಾರಿಗಳಿಗೆ ಜ್ಞಾನಭಾರತಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದ್ರೆ, ಐಟಿ ಅಧಿಕಾರಿಗಳು ನಾವು ನಿಮಗೆ ಯಾವುದೇ ಮಾಹಿತಿ ಕೊಡಲು ಆಗುವುದಿಲ್ಲ. ತನಿಖೆಗೆ ಸಹಕರಿಸುತ್ತೇವೆ. ಅದಕ್ಕೆ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ. ಈ‌ ಮಾಹಿತಿ ಪೊಲೀಸ್ ಮೂಲಗಳಿಂದ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.

ಪರಮೇಶ್ವರ್ ಜೊತೆ ಎಷ್ಟು ದಿವಸದಿಂದ ಕೆಲಸ ನಿರ್ವಹಿಸುತ್ತಿದ್ದರು. ಅವರ ಸಂಬಂಧ ಹೇಗಿತ್ತು ಎಂದು ರಮೇಶ್ ಕುಟುಂಬಸ್ಥರ ಹೇಳಿಕೆಯನ್ನ ಕೂಡ ಪೊಲೀಸರು ಪಡೆದಿದ್ದಾರೆ. ಪರಮೇಶ್ವರ್ ಅವರಿಂದಲೂ ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಪೊಲೀಸರ ಬಳಿ‌ ರಮೇಶ್ ಆತ್ಮಹತ್ಯೆಗೂ ತನ್ನ ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ಪರಮೇಶ್ವರ್​ ತಿಳಿಸಿದ್ದಾರೆ ಎನ್ನಲಾಗ್ತಿದೆ.

ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿಯೇ ರಮೇಶ್ ಅವರ ಮೇಲೆ ಕೂಡ ದಾಳಿ ನಡೆದಿತ್ತು. ದಾಳಿಗೆ ಹೆದರಿದ್ದ ರಮೇಶ್​ ಡೆತ್​​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.

ABOUT THE AUTHOR

...view details