ಕರ್ನಾಟಕ

karnataka

ಮಾಜಿ ಸಚಿವ ರಾಮದಾಸ್​​ ವಿರುದ್ಧ ಪ್ರೇಮ ಪ್ರಕರಣ ರದ್ದು ಕೋರಿ ಹೈಕೊರ್ಟ್​ಗೆ ಅರ್ಜಿ

By

Published : Nov 12, 2019, 11:52 PM IST

ಮಾಜಿ ಸಚಿವ ರಾಮದಾಸ್ ವಿರುದ್ಧ ಪ್ರೇಮ ಕುಮಾರಿ ದಾಖಲಿಸಿದ್ದ ಪ್ರಕರಣ ರದ್ದು ಮಾಡುವಂತೆ ಕೋರಿ ರಾಮದಾಸ್, ಹೈಕೊರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ರಾಮದಾಸ್

ಬೆಂಗಳೂರು:ಮಾಜಿ ಸಚಿವ ರಾಮದಾಸ್ ವಿರುದ್ಧ ದಾಖಲಾಗಿದ್ದ ಪ್ರೇಮ ಪ್ರಕರಣ ರದ್ದು ಮಾಡುವಂತೆ ಕೋರಿ ರಾಮದಾಸ್, ಹೈಕೊರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರಿನ ಶಾಸಕ, ಮಾಜಿ ಸಚಿವ ರಾಮದಾಸ್ ಅವರ ವಿರುದ್ಧ ಈ ಹಿಂದೆ ಪ್ರೇಮ ಕುಮಾರಿ ನೀಡಿದ್ದ ದೂರಿನನ್ವಯ ಪ್ರಕರಣವನ್ನು ಸರಸ್ವತಿ ಪುರಂ ಪೊಲೀಸರು ದಾಖಲಿಸಿಕೊಂಡಿದ್ದರು. ನಂತರ ಪೊಲೀಸರು ಸಲ್ಲಿಸಿದ ಬಿ ರಿಪೋರ್ಟ್​ ಹಾಗೂ ಪ್ರೇಮ ಕುಮಾರಿ ಅವರ ಮನವಿ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ. 16 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಇದನ್ನು ರದ್ದು ಕೋರಿ ಹೈಕೊರ್ಟ್​ಗೆ ರಾಮದಾಸ್ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣ ಹಿನ್ನೆಲೆ:

ಮಾಜಿ ಸಚಿವ ರಾಮದಾಸ್​​, ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಪ್ರೇಮ ಕುಮಾರಿ ಎಂಬವರು ಆರೋಪಿಸಿ ಸರಸ್ವತಿ ಪುರಂ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ABOUT THE AUTHOR

...view details