ಕರ್ನಾಟಕ

karnataka

ETV Bharat / city

ತೃತೀಯ ಲಿಂಗ ಸಮುದಾಯಕ್ಕೆ ಭರವಸೆಯ ಯೋಜನೆ ಆಶಾಕಿರಣ : ರತ್ನಪ್ರಭ - Bangalore News

ಕಾಲಿನ್ಸ್ ಏರೋಸ್ಪೇಸ್ ಹಾಗೂ ಆ್ಯರೇಂಜ್ ಟೆಕ್ ಅವರ ಈ ಹೆಜ್ಜೆ ಅತ್ಯಂತ ಶ್ಲಾಘನೀಯ. ಸಮಾಜದಲ್ಲಿ ತೃತೀಯ ಲಿಂಗದ ಸಮುದಾಯದವರೂ ಸಹ ಗೌರವಯುತವಾದ ಜೀವನ ನಡೆಸಲು ಇವರು ಅನುವು ಮಾಡಿಕೊಟ್ಟಿದ್ದಾರೆ..

Project Hope Plan for the Third Gender Community: Rathnaprabha
ತೃತೀಯ ಲಿಂಗ ಸಮುದಾಯಕ್ಕೆ ಭರವಸೆಯ ಯೋಜನೆ ಆಶಾಕಿರಣ: ರತ್ನಪ್ರಭ

By

Published : Jul 8, 2020, 10:16 PM IST

ಬೆಂಗಳೂರು :ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಕೋಲಾರ ಜಿಲ್ಲೆಯಲ್ಲಿ ತೃತೀಯ ಲಿಂಗ ಸಮುದಾಯಕ್ಕೆ "ಭರವಸೆಯ ಯೋಜನೆ" (ಪ್ರಾಜೆಕ್ಟ್‌ ಹೋಪ್) ಮೂಲಕ ಡೈರಿ ಫಾರ್ಮಿಂಗ್ ನಡೆಸಲು ಕೌಶಲ್ಯ ತರಬೇತಿ‌ ನೀಡಿ, ಸೌಲಭ್ಯ ಒದಗಿಸಿಕೊಡಲಾಗಿದೆ.

ಇಂದು ಈ ಯೋಜನೆಯ ಸಮ್ಮೇಳನ ಸಮಾರಂಭವನ್ನ ಆನ್‌ಲೈನ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಲಾಯಿತು. ಈ ಕಾನ್ಫರೆನ್ಸ್‌ನಲ್ಲಿ ಕೆಎಸ್‌ಡಿಎ ಅಧ್ಯಕ್ಷೆ ರತ್ನಪ್ರಭ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ರತ್ನಪ್ರಭ ಸಮ್ಮೇಳನ ಸಮಾರಂಭಕ್ಕೆ ಚಾಲನೆ ನೀಡಿದರು. ಈ ವಿನೂತನ ಯೋಜನೆಗೆ ತೃತೀಯ ಲಿಂಗದ ಸಮುದಾಯವನ್ನ ಆಯ್ಕೆ ಮಾಡಿಕೊಂಡಿದ್ದು, ಅವರಿಗೆ ಗೌರವಯುತ ಜೀವನ ನಡೆಸಲು ಡೈರಿ ಫಾರ್ಮಿಂಗ್‌ ಕುರಿತ ತರಬೇತಿ ನೀಡಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಕಾಲಿನ್ಸ್ ಏರೋಸ್ಪೇಸ್ ಇಂಡಿಯಾ ಹೊತ್ತಿದ್ದು, ಆ್ಯರೇಂಜ್ ಟೆಕ್ ವತಿಯಿಂದ ಈ ಸಮುದಾಯಕ್ಕೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.

ಸಮಾರಂಭದಲ್ಲಿ ಮಾತನಾಡಿದ ಕೆಎಸ್‌ಡಿಎ ಅಧ್ಯಕ್ಷೆ ರತ್ನಪ್ರಭ, ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ತೃತೀಯ ಲಿಂಗದ ಸಮುದಾಯದವರು ಇಚ್ಚಿಸುತ್ತಾರೆ. ಆದರೆ, ಅವರಿಗೆ ಶಿಕ್ಷಣ ಹಾಗೂ ಕೌಶಲ್ಯದ ಕೊರತೆಯಿಂದ ಅವರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಕಾಲಿನ್ಸ್ ಏರೋಸ್ಪೇಸ್ ಹಾಗೂ ಆ್ಯರೇಂಜ್ ಟೆಕ್ ಅವರ ಈ ಹೆಜ್ಜೆ ಅತ್ಯಂತ ಶ್ಲಾಘನೀಯ. ಸಮಾಜದಲ್ಲಿ ತೃತೀಯ ಲಿಂಗದ ಸಮುದಾಯದವರೂ ಸಹ ಗೌರವಯುತವಾದ ಜೀವನ ನಡೆಸಲು ಇವರು ಅನುವು ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಕೋಲಾರದಲ್ಲಿರುವ ಸಂಕಲ್ಪ ಎಂಬ ಟ್ರಸ್ಟ್‌ನನ್ನು ಆಯ್ಕೆ ಮಾಡಿಕೊಂಡು, ಅವರಿಗೆ ಜಾನುವಾರುಗಳ ಸಾಕಾಣಿಕೆ ಸಂಬಂಧ ತರಬೇತಿ ನೀಡಿದ್ದಾರೆ.

ಈಗ ಈ ಸಮುದಾಯದ ಕೆಲವರು ಜಾನುವಾರುಗಳನ್ನು ಸಾಕುವ ಮೂಲಕ ಡೈರಿಗಳಿಗೆ ಹಾಲು ಪೂರೈಕೆ ಮಾಡುವುದು, ಹಾಲಿನಿಂದ ಇತರೆ ಉತ್ಪನ್ನ ತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಕಾರ್ಪೊರೇಟ್‌ ಸಂಸ್ಥೆಗಳು ಇಂಥ ಉಪಯುಕ್ತ ಯೋಜನೆಗಳಿಗೆ ಹಣ ನೀಡುವ ಮೂಲಕ ಸಮಾಜಕ್ಕೆ ಸಹಾಯ ಹಸ್ತ ಚಾಚಬೇಕು. ಸರ್ಕಾರ ಇಂಥವರಿಗೆ ಸದಾ ಬೆಂಬಲವಾಗಿ‌ ನಿಲ್ಲಲಿದೆ ಎಂದರು.

ABOUT THE AUTHOR

...view details