ಕರ್ನಾಟಕ

karnataka

ETV Bharat / city

ಲಾಕ್​​ಡೌನ್​​ನಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ: ಕಮಲ್ ಪಂತ್ - ಕಾನೂನಡಿಯಲ್ಲಿ ಲಾಕ್​ಡೌನ್ ಜಾರಿ

ಲಾಕ್​ಡೌನ್ ಅಂದರೆ ಜನರು ಎಲ್ಲಿಯೂ ಗುಂಪು ಸೇರಬಾರದು. ವಾಹನಗಳ ಓಡಾಟ ಇರುವುದು ನಿಜ. ಏಕೆಂದರೆ ಒಂದಷ್ಟು ಚಟುವಟಿಕೆಗಳಿಗೆ ವಿನಾಯಿತಿ ಇದೆ ಎಂದು ಕಮಲ್​​ ಪಂತ್​ ಹೇಳಿದರು. ದಿನಕ್ಕೆ ಸರಾಸರಿ ಸಾವಿರಾರು ವಾಹನಗಳು ಜಪ್ತಿಯಾಗ್ತಿವೆ, ಮುಂದೆಯೂ ಆಗಲಿದೆ.

police-commissioner-kamal-pant-talk
ಪೊಲೀಸ್ ಆಯುಕ್ತ ಕಮಲ್ ಪಂತ್

By

Published : May 22, 2021, 3:49 PM IST

ಬೆಂಗಳೂರು: ಇಂದು ಒಂದೇ ದಿನ 1500 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಿದ್ದೇನೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಪೊಲೀಸ್ ಆಯುಕ್ತ ಕಮಲ್ ಪಂತ್

ಓದಿ: ಬಾಗಲಕೋಟೆ: ಅನಗತ್ಯವಾಗಿ ಓಡಾಡುವವರಿಗೆ ಪೊಲೀರಿಂದ ಹೂವಿನ ಹಾರ ಹಾಕಿ ಸನ್ಮಾನ

ರಾಜ್ಯ ಸರ್ಕಾರ ಲಾಕ್​ಡೌನ್ ಮುಂದುವರೆಸಿ ಅದೇಶಿಸಿದ್ದು, ಜೂನ್ 7ರ ಬೆಳಗ್ಗೆ 6 ಗಂಟೆಯವರೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ನಿನ್ನೆ ರಾತ್ರಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಕೂಡ ಮಾಹಿತಿ ನೀಡಿದ್ದರು.

ಈ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನೆಡೆಸಿ, ನಗರ ಪೊಲೀಸರು ಕಾನೂನಡಿಯಲ್ಲಿ ಲಾಕ್​ಡೌನ್ ಜಾರಿಗೊಳಿಸಿದ್ದಾರೆ. ಎಲ್ಲೆಡೆ ಬಹುತೇಕ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.

ಎಲ್ಲಿಯೂ ಹೋಟೆಲ್, ಮಾಲ್, ಅಂಗಡಿಗಳು ಅನಗತ್ಯವಾಗಿ ಓಪನ್ ಮಾಡಲಾಗುವುದಿಲ್ಲ. ಇದೇ ರೀತಿ ಮುಂದುವರೆದರೆ ಲಾಕ್​ಡೌನ್ ಯಶಸ್ವಿಯಾಗುವ ಭರವಸೆ ಇದೆ ಎಂದು ಅಭಿಪ್ರಾಯಪಟ್ಟರು. ಕೆಲವು ಕಡೆಗಳಲ್ಲಿ ಅನಗತ್ಯವಾಗಿ ಹೊರಬಂದವರ ವಾಹನಗಳನ್ನ ಸೀಜ್ ಮಾಡಲಾಗಿದೆ. 1500 ವಾಹನಗಳು ಈಗಾಗಲೇ ಜಪ್ತಿಯಾಗಿವೆ. ಸದ್ಯದವರೆಗೆ ಲಾಕ್​ಡೌನ್ ಬಹುತೇಕ ಯಶಸ್ವಿಯಾಗಿದೆ. ಸುಳ್ಳು ನೆಪ ಹೇಳುವವರ ವಾಹನಗಳನ್ನ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಪೂರ್ಣವಾಗಿ ವಿಚಾರಣೆ ಬಳಿಕ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಲಾಕ್​ಡೌನ್ ಅಂದರೆ ಜನರು ಎಲ್ಲಿಯೂ ಗುಂಪು ಸೇರಬಾರದು. ವಾಹನಗಳ ಓಡಾಟ ಇರುವುದು ನಿಜ. ಏಕೆಂದರೆ ಒಂದಷ್ಟು ಚಟುವಟಿಕೆಗಳಿಗೆ ವಿನಾಯಿತಿ ಇದೆ ಎಂದು ಹೇಳಿದರು. ದಿನಕ್ಕೆ ಸರಾಸರಿ ಸಾವಿರಾರು ವಾಹನಗಳು ಜಪ್ತಿಯಾಗ್ತಿವೆ, ಮುಂದೆಯೂ ಆಗಲಿದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಖಂಡಿತಾ. ಅನಗತ್ಯವಾಗಿ ಮನೆಯಿಂದ ಹೊರಬರುವವರ ವಾಹನ ಜಪ್ತಿಯಾಗಲಿದೆ. ಮೊದಲು ಸ್ಥಳದಲ್ಲೇ ವಿಚಾರಣೆಯಾಗಲಿದ್ದು, ನಂತರ ಅಂತವರ ವಿರುದ್ಧ ಎನ್.ಡಿ.ಎಂ.ಎ ಅಥವಾ ಕೆ.ಇ.ಡಿ ಕಾಯ್ದೆಯಡಿ ಪ್ರಕರಣ ದಾಖಲಾಗಲಿದೆ ಎಂದು ಮಾಹಿತಿ ನೀಡಿದರು.

ಲಾಕ್​ಡೌನ್ ಜಾರಿಗೆ ಪೊಲೀಸರು ಶ್ರಮ ವಹಿಸುತ್ತಿದ್ದಾರೆ, ಮುಂದೆಯೂ ಜನರ ಸಹಕಾರ ಹೀಗೆಯೇ ಇರಬೇಕು ಎಂದು ಮನವಿ ಮಾಡುತ್ತೇನೆ. ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಮಾಧ್ಯಮಗಳ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ವಿನಂತಿಸಿದರು.

ಲಾಕ್​ಡೌನ್ ನಿಯಮಗಳ ಜಾರಿಗೆ ಪೊಲೀಸರೊಂದಿಗೆ ಸಹಕರಿಸಿ, ಒಗ್ಗಟ್ಟಿನಿಂದ ಕೋವಿಡ್ 19 ಪರಿಸ್ಥಿತಿ ಗೆಲ್ಲೋಣ‌. ನಿಯಮ ಉಲ್ಲಂಘಿಸಿದರೆ ವಾಹನಗಳ ಜಪ್ತಿ ಮಾಡಿ ಪ್ರಕರಣ ದಾಖಲಿಸುತ್ತೇವೆ‌. ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಬೆಂಗಳೂರಿಗರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂದ್ಫಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ABOUT THE AUTHOR

...view details