ಕರ್ನಾಟಕ

karnataka

By

Published : Aug 31, 2019, 9:25 PM IST

ETV Bharat / city

ಪೋನ್​ ಕದ್ದಾಲಿಕೆ ಕೇಸ್​ .. ಎಫ್ಐಆರ್​ ದಾಖಲಿಸಿಕೊಂಡ ಸಿಬಿಐ..

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಪೋನ್​ ಕದ್ದಾಲಿಕೆ ಪ್ರಕರಣದ ಬಗ್ಗೆ ಸಿಬಿಐ ಇದೀಗ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

phone taping case: CBI registered FIR

ಬೆಂಗಳೂರು:ದೂರವಾಣಿ ಕದ್ದಾಲಿಕೆ ಪ್ರಕರಣದ ನೇತೃತ್ವ ವಹಿಸಿಕೊಂಡಿರುವ ಸಿಬಿಐ, ಆಡಳಿತ ಹಾಗೂ ವಿರೋಧ ಪಕ್ಷಗಳ ಕೆಲ ಮುಖಂಡರು ಹಾಗೂ ಆಪ್ತರ ದೂರವಾಣಿಗಳನ್ನು ಅಕ್ರಮವಾಗಿ ಕದ್ದಾಲಿಕೆ ನಡೆಸಿದ್ದಾರೆ ಎಂದು ಅಪರಿಚಿತ ವ್ಯಕ್ತಿಗಳ ವಿರುದ್ದ ಎಫ್ಐಆರ್​ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದೆ.

ಎಫ್ಐಆರ್ ದಾಖಲಿಸಿಕೊಂಡ ಸಿಬಿಐ​

ಮೈತ್ರಿ ಸರ್ಕಾರದ ಅವಧಿಯಲ್ಲಿ 2018ರ ಅಗಸ್ಟ್‌ 1ರಿಂದ 2019 ಅಗಸ್ಟ್‌ 19ರವರೆಗೆ ಕಾಲಾವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್​ ಟ್ಯಾಪಿಂಗ್​ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ್ದರು.

ಸಿಬಿಐ ಎಫ್ಐಆರ್‌

ಸದ್ಯ ಐಟಿ ಆ್ಯಕ್ಟ್​-2000 ಹಾಗೂ ಇಂಡಿಯನ್​ ಟೆಲಿಪೋನ್ ಆ್ಯಕ್ಟ್​-1885 ಪ್ರಕರಣದಡಿ ಕೇಸು ದಾಖಲಿಸಿ ಸಿಬಿಐ ತನಿಖೆ ನಡೆಸಲಿದೆ.

ABOUT THE AUTHOR

...view details