ಕರ್ನಾಟಕ

karnataka

ಸಚಿವ ಸ್ಥಾನದಿಂದ ಅಶ್ವತ್ಥ್‌ ನಾರಾಯಣ ವಜಾಗೊಳಿಸಲು ಆಗ್ರಹಿಸಿ ಎನ್ಎಸ್‌ಯುಐ ಪ್ರತಿಭಟನೆ

By

Published : May 4, 2022, 12:46 PM IST

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಚಿವರ ಸಹೋದರನ ಹೆಸರು ಕೇಳಿ ಬಂದಿದೆ. ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸುವಂತೆ ಎನ್​ಎಸ್​ಯುಐ ಪ್ರತಿಭಟನೆ ನಡೆಸಿದೆ..

nsui-protest-against-psi-recruitment-scam
ಅಶ್ವಥ್ ನಾರಾಯಣರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಎನ್ಎಸ್ ಯುಐ ಪ್ರತಿಭಟನೆ

ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಮತ್ತು ಅವರ ಸಹೋದರ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹೀಗಾಗಿ, ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಬಂಧಿಸುವಂತೆ NSUI ವತಿಯಿಂದ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿತು. ಈ ವೇಳೆ ಪ್ರತಿಭಟನಾಕಾರರು ಶೇಮ್ ಶೇಮ್ ಬಿಜೆಪಿ ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣವೇನು?: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಮಧ್ಯೆ ಪಿಎಸ್ಐ ನೇಮಕಾತಿಗಾಗಿ 80 ಲಕ್ಷ ರೂ. ಸಚಿವರ ಸಹೋದರನಿಗೆ ನೀಡಿರುವುದಾಗಿ 4ನೇ ರ್ಯಾಂಕ್ ಬಂದಿದ್ದ ದರ್ಶನ್ ಗೌಡ ವಿಚಾರಣೆ ವೇಳೆ ಮಾಹಿತಿ ಬಹಿರಂಗ ಪಡಿಸಿದ್ದಾನೆ. ಪಿಎಸ್ಐ ನೇಮಕಾತಿ ತಾತ್ಕಾಲಿಕ ಪಟ್ಟಿ ಬರುವ ಮುನ್ನವೇ ಪಿಎಸ್‌ಐ ಆಗಿರುವುದಾಗಿ ಹೇಳಿಕೊಂಡಿದ್ದು, ಇದೀಗ ಈತನ‌ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:ಬಸವ ಜಯಂತಿ ಮೆರವಣಿಗೆ ವೇಳೆ ಬೆದರಿ ಬಾವಿಗೆ ಬಿದ್ದ ಎತ್ತು ರಕ್ಷಣೆ

ABOUT THE AUTHOR

...view details