ಕರ್ನಾಟಕ

karnataka

ETV Bharat / city

ಸಿಎಂ ಭೇಟಿ ಮಾಡಿ ಧನ್ಯವಾದ ಅರ್ಪಿಸಿದ ರೇಣುಕಾಚಾರ್ಯ, ಜೀವರಾಜ್

ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಎಂ.ಪಿ.ರೇಣುಕಾಚಾರ್ಯ ಮತ್ತು ಜೀವರಾಜ್ ನೇಮಕಗೊಂಡಿದ್ದಾರೆ.

By

Published : Sep 30, 2021, 4:43 PM IST

ಸಿಎಂಗೆ ಅಭಿನಂದನೆ ಸಲ್ಲಿಸಿದ ನೂತನ ರಾಜಕೀಯ ಕಾರ್ಯದರ್ಶಿಗಳು
ಸಿಎಂಗೆ ಅಭಿನಂದನೆ ಸಲ್ಲಿಸಿದ ನೂತನ ರಾಜಕೀಯ ಕಾರ್ಯದರ್ಶಿಗಳು

ಬೆಂಗಳೂರು: ಮುಖ್ಯಮಂತ್ರಿಗಳ ನೂತನ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಎಂ.ಪಿ.ರೇಣುಕಾಚಾರ್ಯ ಮತ್ತು ಜೀವರಾಜ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರು.

ಇಂದು ಬೆಳಗ್ಗೆ ಅಧಿಕೃತವಾಗಿ ನೇಮಕಾತಿ ಆದೇಶ ಹೊರಬೀಳುತ್ತಿದ್ದಂತೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್-1ಕ್ಕೆ ಎಂ.ಪಿ ರೇಣುಕಾಚಾರ್ಯ ಮತ್ತು ಜೀವರಾಜ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವಕಾಶ ಕಲ್ಪಿಸಿದ್ದಕ್ಕಾಗಿ ಸಿಎಂಗೆ ಧನ್ಯವಾದ ತಿಳಿಸಿದರು.

ಸಿಎಂಗೆ ಧನ್ಯವಾದ ಸಲ್ಲಿಸಿದ ನೂತನ ರಾಜಕೀಯ ಕಾರ್ಯದರ್ಶಿಗಳು
ಈ ಹಿಂದೆ ಯಡಿಯೂರಪ್ಪ ಸರ್ಕಾರದ ವೇಳೆಯಲ್ಲಿಯೂ ಈ ಇಬ್ಬರು ನಾಯಕರು ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿದ್ದರು. ಆದರೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಇಬ್ಬರನ್ನೂ ಹುದ್ದೆಯಿಂದ ಬಿಡುಗಡೆ ಮಾಡಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಆದೇಶಿಸಿತ್ತು.

ನೂತನ ಸಂಪುಟ ರಚನೆಯಾದರೂ ಅವಕಾಶ ಸಿಗದೆ ಕಾದು ಕುಳಿತಿದ್ದ ಉಭಯ ನಾಯಕರಿಗೆ ಮತ್ತೆ ಹಿಂದಿನ ಹುದ್ದೆಯನ್ನೇ ನೀಡುವ ಮೂಲಕ ಬಿಎಸ್​​ವೈ ಅವಧಿಯ ನೇಮಕಾತಿಗೆ ಬೊಮ್ಮಾಯಿ ಮಾನ್ಯತೆ ನೀಡಿದ್ದಾರೆ.

ABOUT THE AUTHOR

...view details