ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಏರ್ಪಡಿಸಿದ್ದ 'ಸ್ವಚ್ಛ ಸರ್ವೇಕ್ಷಣ್-2021'(Swachh Survekshan 2021) ಸಫಾಯಿ ಮಿತ್ರ ಸುರಕ್ಷಾ ಸ್ಪರ್ಧೆಯಲ್ಲಿ ಕರ್ನಾಟಕದ ಮುಧೋಳ (Mudhol) ನಗರ ಪ್ರಶಸ್ತಿ ಪಡೆದಿದೆ. ಇದಕ್ಕಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ (Minister Govind Karjol) ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
'ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆ'ಯಲ್ಲಿ ಮುಧೋಳ ನಗರಕ್ಕೆ ಪ್ರಶಸ್ತಿ: ಸಚಿವ ಕಾರಜೋಳ ಪ್ರಶಂಸೆ - ಸಚಿವ ಗೋವಿಂದ ಕಾರಜೋಳ ಪ್ರಶಂಸೆ
'ಮುಧೋಳ' (Mudhol) ಭಾರತದ ಕಸಮುಕ್ತ ನಗರ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಗೋವಿಂದ ಎಂ.ಕಾರಜೋಳ (Minister Govind Karjol ) ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
!['ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆ'ಯಲ್ಲಿ ಮುಧೋಳ ನಗರಕ್ಕೆ ಪ್ರಶಸ್ತಿ: ಸಚಿವ ಕಾರಜೋಳ ಪ್ರಶಂಸೆ Minister Govind Karjol](https://etvbharatimages.akamaized.net/etvbharat/prod-images/768-512-13604608-thumbnail-3x2-news.jpg)
ಸಚಿವ ಗೋವಿಂದ ಕಾರಜೋಳ
ಭಾರತದ ಕಸಮುಕ್ತ ನಗರ ಎಂಬ ಹೆಮ್ಮೆಗೆ ಪಾತ್ರವಾಗಿರುವ ಮುಧೋಳ ನಗರದ ನಾಗರಿಕರು, ನಗರಸಭೆಯ ಸ್ವಚ್ಛತಾ ಸಿಬ್ಬಂದಿ, ಅಧಿಕಾರಿಗಳು ಹಾಗು ಇದಕ್ಕಾಗಿ ಮಾರ್ಗದರ್ಶನ ಮಾಡಿದ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿ ವರ್ಗದವರನ್ನು ಸಚಿವರು ಅಭಿನಂದಿಸಿದ್ದಾರೆ.
ನ.20 ನವದೆಹಲಿಯ ವಿಜ್ಞಾನ ಭವನದಲ್ಲಿ 'ಸ್ವಚ್ಛ ಅಮೃತ ಮಹೋತ್ಸವ' ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ 'ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ'ಯನ್ನು ಪ್ರದಾನ ಮಾಡಲಿದ್ದಾರೆ.