ಬೆಂಗಳೂರು:ನಮ್ಮ ಮೇಲೆ ಇದ್ದ ಭಾರವನ್ನ ಸೋನಿಯಾ ಗಾಂಧಿ ಕಡಿಮೆ ಮಾಡಿದ್ದಾರೆ. ಈಗ ನಿರ್ಧಾರ ತೆಗೆದುಕೊಳ್ಳಲು ನಾವು ಸ್ವತಂತ್ರವಾಗಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮಕರ ಸಂಕ್ರಾತಿಯ ಶುಭಾಶಯವಮ್ನ ಎಐಸಿಸಿ ಕೊಟ್ಟಿರೋದನ್ನ ನೋಡಿ ಮನಸ್ಸಿಗೆ ತುಂಬಾ ಸಂತೋಷ ಆಯ್ತು. ಸಿದ್ದರಾಮಯ್ಯ- ಶಿವಕುಮಾರ್ ಟೀಮ್ ಒಟ್ಟಿಗೆ ಕೆಲಸ ಮಾಡಲು ಇದು ಸಹಾಯ ಆಗುತ್ತೆ. ಕಾಂಗ್ರೆಸ್ ಹಾಗೂ ನಮ್ಮ ಸಂಬಂಧ ಮುಗಿದ ಅಧ್ಯಾಯ. ಹಿತೈಷಿಗಳನ್ನ ಕರೆದು ಮಾತನಾಡಿಸಿ ಶೀಘ್ರದಲ್ಲೇ ರಾಜೀನಾಮೆ ನಿರ್ಧಾರ ಕೈಗೊಳ್ತೀವಿ ಎಂದರು.
ಸಿದ್ದರಾಮಯ್ಯ ಅವರಿಂದಲೇ ನಾನು ಕಾಂಗ್ರೆಸ್ಗೆ ಬಂದೆ. ಸಿದ್ದರಾಮಯ್ಯ ಸಲುವಾಗಿ ದೇವೇಗೌಡರಂತಹ ನಾಯಕರನ್ನ ಬಿಟ್ಟೆ. ಜೈಲಲಿದ್ದು ಕಟ್ಟಿದ ಜನತಾದಳ ಪಕ್ಷವನ್ನು ಈ ಮನುಷ್ಯನ ಸಲುವಾಗಿ ತೊರೆದೆ. ಆದರೆ, ಇವರೇ ನಮಗೆ ಕೈಕೊಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.
ಬೇರೆ ಪಕ್ಷ ಸೇರ್ಪಡೆ ಬಗ್ಗೆ ಚಿಂತನೆ:1996 ರಲ್ಲಿ ರಾಜ್ಯಸಭಾ ಟಿಕೆಟ್ ಘೋಷಿಸಿ ರದ್ದು ಮಾಡಿದರು. ಆಗ ನಾನು ಕಾಂಗ್ರೆಸ್ ಬಿಟ್ಟೆ. ಈಗ ಮತ್ತೆ 20 ವರ್ಷದ ಬಳಿಕ ಪಕ್ಷ ಇದೇ ರೀತಿ ಮಾಡಿದೆ. ಕಾಂಗ್ರೆಸ್ಗೆ ಜನರೇ ಉತ್ತರ ನೀಡುತ್ತಾರೆ ಎಂದರು. ಮುಂದೆ ರಾಜಕೀಯದಲ್ಲಿ ಜೆಡಿಎಸ್ ಸೇರೋದಾ, ಟಿಎಂಸಿ, ಅಥವಾ ಬೇರೆ ಪಕ್ಷ ಸೇರುವುದೇ ಎಂಬ ಬಗ್ಗೆ ಶೀಘ್ರವೇ ನಿರ್ಧಾರ ಮಾಡಲಾಗುವುದು. ಕುಮಾರಸ್ವಾಮಿ ನಮ್ಮ ಸ್ನೇಹಿತರು ಅವರ ಜೊತೆಯೂ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ:ಬಿಜೆಪಿ ಎನ್ನುವ ವೈರಸ್ಗೆ ಕಾಂಗ್ರೆಸ್ ವ್ಯಾಕ್ಸಿನ್: ಪ್ರಿಯಾಂಕ್ ಖರ್ಗೆ ವ್ಯಂಗ್ಯ