ಕರ್ನಾಟಕ

karnataka

By

Published : Jul 20, 2021, 11:28 AM IST

ETV Bharat / city

ನಾಯಕತ್ವ ಬದಲಾವಣೆಯ ವದಂತಿ ಬೆನ್ನಲ್ಲೇ: ಕಾವೇರಿಗೆ ಶಾಸಕರು - ಸಚಿವರ ಭೇಟಿ

ಸಚಿವ ಮುರುಗೇಶ್ ನಿರಾಣಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸೋಮಣ್ಣ ಮತ್ತು ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಅಮೃತ ದೇಸಾಯಿ, ಸೋಮಶೇಖರ್ ರೆಡ್ಡಿ, ಡಿಸಿಎಂ ಗೋವಿಂದ ಕಾರಜೋಳ ಸಿಎಂ ಭೇಟಿಯಾಗಿದ್ದಾರೆ.

Bangalore
ಕಾವೇರಿಗೆ ಶಾಸಕರು-ಸಚಿವರ ಭೇಟಿ

ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಶಾಸಕರು ಹಾಗೂ ಸಚಿವರು ಸರಣಿಯಾಗಿ ಆಗಮಿಸುತ್ತಿದ್ದಾರೆ. ನೂತನ ಸಿಎಂ ರೇಸ್​ನಲ್ಲಿ ಹೆಸರು ಕೇಳಿಬರುತ್ತಿದ್ದ ಮುರುಗೇಶ್ ನಿರಾಣಿ ಸಹ ಬಿಎಸ್​ವೈ ಅವರನ್ನು ಭೇಟಿಯಾಗಿದ್ದಾರೆ. ಇದರ ಜೊತೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸೋಮಣ್ಣ ಮತ್ತು ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಅಮೃತ ದೇಸಾಯಿ, ಸೋಮಶೇಖರ್ ರೆಡ್ಡಿ, ಡಿಸಿಎಂ ಗೋವಿಂದ ಕಾರಜೋಳ ಸಿಎಂ ಭೇಟಿಯಾಗಿದ್ದಾರೆ.

ನಾಯಕರು ಸಿಎಂ ಭೇಟಿ ನಂತರ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳುತ್ತಿದ್ದಾರೆ. ಸಿಎಂ ನಗುಮುಖದಲ್ಲೇ ಎಲ್ಲರನ್ನು ಸ್ವಾಗತಿಸಿ, ಕುಶಲೋಪರಿ ವಿಚಾರಿಸುತ್ತಿದ್ದಾರೆ.

ಸಿಎಂ ಭೇಟಿ ಮಾಡಿದ ವಸತಿ ಸಚಿವ ವಿ.ಸೋಮಣ್ಣ

ವಿ.ಸೋಮಣ್ಣ ಹುಟ್ಟುಹಬ್ಬ
ಇಂದು ವಸತಿ ಸಚಿವ ವಿ.ಸೋಮಣ್ಣ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿದರು. ಬಿಎಸ್​ವೈ ಸೋಮಣ್ಣನವರನ್ನು ಅಭಿನಂದಿಸಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಡಾ.ನವೀನ್, ದಾಸೇಗೌಡ ಜೊತೆಯಲ್ಲಿದ್ದರು.

ಇದನ್ನೂ ಓದಿ:Pegasus spyware: ಎಲ್ಲಾ ರಾಜ್ಯಗಳಲ್ಲೂ ನಾಳೆ ಕಾಂಗ್ರೆಸ್ ಸುದ್ದಿಗೋಷ್ಠಿ.. ಇಂದು ಪಿಎಂ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ!

ABOUT THE AUTHOR

...view details