ಕರ್ನಾಟಕ

karnataka

ETV Bharat / city

ಸಚಿವರ‌ ಪುತ್ರನಿಗೆ ಬ್ಲಾಕ್‌ಮೇಲ್ ಕೇಸ್​ನಲ್ಲಿ ನನ್ನ ಪುತ್ರಿಯ ಪಾತ್ರವಿಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ್ - ಶಾಸಕ ಯಶವಂತರಾಯಗೌಡ ಪಾಟೀಲ್ ಪುತ್ರಿ ವಿರುದ್ಧ ಆರೋಪ

ಈ ವಿಚಾರವಾಗಿ ನಾನು ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಿದ್ದೇನೆ. ತನ್ನ ಮಗಳ ಮೇಲೆ ವಿನಾಕಾರಣ ಆರೋಪ ಬಂದಿದೆ. ತಪ್ಪಿತಸ್ಥರು ಯಾರೇ ಇದ್ದರೂ, ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸದ್ಯ ತನಿಖೆ ನಡೆಯುತ್ತಿದೆ. ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಬೇಕು ಎಂದರು.

blackmail
ಪಾಟೀಲ್

By

Published : Jan 10, 2022, 1:00 PM IST

ಬೆಂಗಳೂರು:ಸಹಕಾರಿ ಸಚಿವ ಎಸ್.ಟಿ‌. ಸೋಮಶೇಖರ್ ಪುತ್ರನಿಗೆ, ಜ್ಯೋತಿಷಿಯೊಬ್ಬರ ಮಗನಿಂದ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಶಾಸಕರೊಬ್ಬರ ಪುತ್ರಿಯ ಹೆಸರು ಕೇಳಿಬಂದಿದೆ. ಶಾಸಕರ ಪುತ್ರಿಯ ಹೆಸರಿನಲ್ಲಿದ್ದ ಮೊಬೈಲ್​ನಿಂದ ಸಚಿವರ ಪುತ್ರನಿಗೆ ಬೆದರಿಕೆ ಹಾಕಲಾಗಿತ್ತು ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ.

ಸಚಿವರ‌ ಪುತ್ರನಿಗೆ ಬ್ಲಾಕ್‌ಮೇಲ್ ಕೇಸ್​ನಲ್ಲಿ ನನ್ನ ಪುತ್ರಿಯ ಪಾತ್ರವಿಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ್

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ತಮ್ಮ ಮಗಳ‌‌ ಮೇಲೆ ಬಂದಿರುವ ಆರೋಪ ತಳ್ಳಿ ಹಾಕಿದ್ದಾರೆ. ಅಲ್ಲದೇ, ನನ್ನ ಪುತ್ರಿ ಕಳೆದ ಮಾರ್ಚ್​ನಲ್ಲಿ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್​ಗೆ ತೆರಳಿದ್ದಾಳೆ. ಆರೋಪಿ ರಾಕೇಶ್ ಮತ್ತು ನನ್ನ ಮಗಳು ಗೆಳೆಯರು. ಯಾವುದೋ ಬ್ಯುಸಿನೆಸ್​ ವಿಚಾರವಾಗಿ ತನ್ನ ಮೊಬೈಲ್​ನಿಂದ ರಾಕೇಶ್​ಗೆ ಒಟಿಪಿ ಕಳುಹಿಸಿದ್ದಾಳೆ ಅಷ್ಟೇ. ಪ್ರಕರಣದಲ್ಲಿ ತನ್ನ ಮಗಳ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ವಿಚಾರವಾಗಿ ನಾನು ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಿದ್ದೇನೆ. ತನ್ನ ಮಗಳ ಮೇಲೆ ವಿನಾಕಾರಣ ಆರೋಪ ಬಂದಿದೆ. ತಪ್ಪಿತಸ್ಥರು ಯಾರೇ ಇದ್ದರೂ, ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸದ್ಯ ತನಿಖೆ ನಡೆಯುತ್ತಿದೆ. ಪ್ರಕರಣದ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಬೇಕು ಎಂದರು.

ಇದನ್ನೂ ಓದಿ:ರಾಜ್ಯಾದ್ಯಂತ ಬೂಸ್ಟರ್ ಡೋಸ್ ಲಸಿಕಾಭಿಯಾನಕ್ಕೆ ಸಿಎಂ ಚಾಲನೆ: ಸ್ಪುಟ್ನಿಕ್ ಲಸಿಕೆ ಪಡೆದವರಿಗಿಲ್ಲ ಬೂಸ್ಟರ್ ಡೋಸ್

For All Latest Updates

TAGGED:

ABOUT THE AUTHOR

...view details