ಬೆಂಗಳೂರು: ಸಚಿವ ಸ್ಥಾನ ನೀಡಿಲ್ಲ ಅಂತ ಬೇಸರವಿದೆಯೇ ಹೊರತು ಅಸಮಾಧಾನವಿಲ್ಲ. ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಪಕ್ಷ, ಸಂಘದಿಂದಲೂ ನನಗೆ ಸಚಿವ ಸ್ಥಾನದ ಭರವಸೆ ಸಿಕ್ಕಿತ್ತು. ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಈ ಸಂಬಂಧ ನಮ್ಮ ನಾಯಕರಾದ ಮುಖ್ಯಮಂತ್ರಿಗಳ ಬಳಿ ಮಾತಾಡಿದೀನಿ. ಮುಂದಿನ ದಿನಗಳಲ್ಲಿ ಒಳ್ಳೆದಾಗುತ್ತೆ, ಚಿಂತೆ ಮಾಡಬೇಡ ಅಂತ ಸಿಎಂ ಹೇಳಿದ್ದಾರೆ ಎಂದು ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಸುರಪುರ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದರು.
ನಮ್ಮ ಜಿಲ್ಲೆ ಯಾದಗಿರಿಗೂ ಒಂದು ಸಚಿವ ಸ್ಥಾನ ನೀಡಿಲ್ಲ. ಯಡಿಯೂರಪ್ಪನವರು ನನಗೆ ಸಚಿವ ಸ್ಥಾನ ಸಿಗುತ್ತೆ ಅಂದಿದ್ದರು. ಇದರಿಂದ ಕುಟುಂಬದವರು, ಕ್ಷೇತ್ರದ ಜನರು ಖುಷಿಯಾಗಿದ್ರು, ಈಗ ಬೇಸರ ಆಗಿದ್ದಾರೆ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ನಮ್ಮವರೇ ನನಗೆ ಸಚಿವ ಸ್ಥಾನ ತಪ್ಪಿಸಿಬಿಟ್ರು. ನಾನು ನೋ ಬಾಲ್ಗೆ ಔಟ್ ಆಗೋದ್ನಲ್ಲ ಅನ್ನೋದೆ ನನಗೆ ಬೇಜಾರು ಅಂತ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.