ಬೆಂಗಳೂರು: ಇವತ್ತು ಬೆಳಗ್ಗೆ ಸಾಗರಿದಿಂದ ರೋಗಿಯೊಬ್ಬರ ಪ್ಯಾರಾಲಿಸೀಸ್ ಆಗಿ ನಿಮ್ಹಾನ್ಸ್ಗೆ 7 ಗಂಟೆಗೆ ಕರೆದುಕೊಂಡು ಬರಲಾಗಿದೆ. 7 ಗಂಟೆಯಿಂದ 10 ಗಂಟೆಗೆ 1 ಬೆಡ್ ಕೊಡಿಸಲು ಪ್ರಯತ್ನಿಸಿದೆ. ಆದ್ರೆ ಆಸ್ಪತ್ರೆಯವರು ದಾಖಲು ಮಾಡಿಕೊಂಡಿಲ್ಲ. ಹೆಲ್ತ್ ಕಮಿಷನರ್ ಜೊತೆ ಮಾತಾಡಿದೆ. ಆರೋಗ್ಯ ಇಲಾಖೆ ಆಯುಕ್ತರು, ನಿಮ್ಹಾನ್ಸ್ ನಿರ್ದೇಶಕರಿಗೆ ಮಾತನಾಡಿದರೂ ದಾಖಲು ಮಾಡಿಕೊಂಡಿಲ್ಲ. ವೆಂಟಿಲೇಟರ್ ಇಲ್ಲ ಅಂತಾರೆ. ರಾಜ್ಯದಲ್ಲಿ ಇನ್ನೂ ವೆಂಟಿಲೇಟರ್ ಸಮಸ್ಯೆ ಇದಿಯಾ ಎಂದು ಪ್ರಶ್ನಿಸಿದರು.
ನಿಮ್ಹಾನ್ಸ್ ಒಂದು ಒಳ್ಳೆ ಸಂಸ್ಥೆ. ರೋಗಿಗೆ ಬ್ರೈನ್ ಹ್ಯಾಮರೇಜ್ ಆಗಿದೆ. ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಇದೀಗ ಹಾಲಿ ಸದಸ್ಯ. ತಮಗೆ ನೋಟಿಸ್ ಕೊಟ್ಟಿದ್ದಾಗ ಆರೋಗ್ಯ ಸಚಿವರನ್ನು ಕರೆಸಿದ್ದೀರಿ. ಇದೀಗ ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದೂಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆಂದು ಹಾಲಪ್ಪ ಸದನದಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ನಿಮ್ಹಾನ್ಸ್ ಬಹಳ ಪ್ರತಿಷ್ಠಿತ ಸಂಸ್ಥೆ. ಕೇಂದ್ರ ಸರ್ಕಾರ ವಿಶೇಷವಾಗಿ ಅನುದಾನ ನೀಡುತ್ತೆ. ರಾಜ್ಯ ಸರ್ಕಾರವೂ ವರ್ಷದಲ್ಲಿ 70 ರಿಂದ 80 ಕೋಟಿ ಅದರ ನಿಮ್ಹಾನ್ಸ್ ನಿರ್ವಹಣೆಗೆ ಕೊಡುತ್ತದೆ. ನಿಮ್ಹಾನ್ಸ್ಗೆ ಒಳರೋಗಿಗಳು ಕೇವಲ ಕರ್ನಾಟಕದಿಂದ ಬರುವುದಿಲ್ಲ. ಇಡೀ ದಕ್ಷಿಣ ಭಾರತದಿಂದ ಬರುತ್ತಾರೆ.