ಕರ್ನಾಟಕ

karnataka

ETV Bharat / city

ಒಂಟಿ ಮಹಿಳೆ ಕತ್ತು ಕೊಯ್ದು ಕೊಲೆ: ಚಿನ್ನಾಭರಣ, ನಗದು ದೋಚಿ ಹಂತಕರು ಪರಾರಿ

ಒಂಟಿ ಮಹಿಳೆಯನ್ನು ಕೊಂದು ಕಳ್ಳರು ಚಿನ್ನಾಭರಣ ಕಳವು ಮಾಡಿದ ಘಟನೆ ದೇವನಹಳ್ಳಿ ಪಟ್ಟಣದ ಐಶ್ವರ್ಯ ಬಡಾವಣೆಯಲ್ಲಿ ನಡೆದಿದೆ.

By

Published : Jul 16, 2022, 1:15 PM IST

Updated : Jul 16, 2022, 1:24 PM IST

Miscreants killed woman  in Devanahalli
ಅಂಚನಾ ತುಳಸಿಯಾನ-ಕೊಲೆಯಾದ‌ ಮಹಿಳೆ

ದೇವನಹಳ್ಳಿ(ಬೆಂಗಳೂರು): ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಅಪರಿಚಿತರು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಐಶ್ವರ್ಯ ಬಡಾವಣೆಯಲ್ಲಿ ನಿನ್ನೆ(ಶುಕ್ರವಾರ) ಸಂಜೆ ನಡೆದಿದೆ. ಅಂಚನಾ ತುಳಸಿಯಾನ( 57) ಕೊಲೆಯಾದ‌ ಮಹಿಳೆ. ನಿನ್ನೆ‌ ಸಂಜೆ ಮನೆಯಲ್ಲಿದ್ದವರು ಹಾರ್ಡ್‌ವೇರ್‌ ಅಂಗಡಿಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿದ ಹಂತಕರು ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ.

ದೇವನಹಳ್ಳಿಯಲ್ಲಿ ಒಂಟಿ ಮಹಿಳೆ ಕತ್ತು ಕೊಯ್ದು ಕೊಲೆ

ಮನೆಗೆ ನುಗ್ಗಿದ ದುರುಳರು ಮಹಿಳೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ‌ದ್ದಾರೆ. ಬಳಿಕ ಮನೆಯಲ್ಲಿದ್ದ 12 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಲಕ್ಷ ರೂ. ನಗದು ಎತ್ತಿಕೊಂಡು ಪರಾರಿಯಾಗಿದ್ದಾರೆ. ತಾವು ಮಾಡಿರುವ ಕೃತ್ಯ ಯಾರಿಗೂ ತಿಳಿಯಬಾರದೆಂದು ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಸಹಿತ ಎಸ್ಕೇೆಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಜೈಲಿನಲ್ಲಿದ್ದ ಸ್ನೇಹಿತರಿಗೆ ಮಾದಕ ವಸ್ತು ಪೂರೈಕೆ ಯತ್ನ: ಇಬ್ಬರು ಯುವತಿಯರ ಬಂಧನ

Last Updated : Jul 16, 2022, 1:24 PM IST

ABOUT THE AUTHOR

...view details