ಕರ್ನಾಟಕ

karnataka

ಪರೀಕ್ಷಾ ಕೇಂದ್ರವಲ್ಲ, ಇದು ಸುರಕ್ಷಿತ ಕೇಂದ್ರ: ಮಕ್ಕಳು, ಪೋಷಕರಿಗೆ ಸುರೇಶ್​ ಕುಮಾರ್​ ಅಭಯ

ನಾಳೆ ಎಸ್​​ಎಸ್​​ಎಲ್​​ಸಿ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸಿದ್ಧತೆ ಪರಿಶೀಲಿಸಲು ಶಿಕ್ಷಣ ಸಚಿವ ಸುರೇಶ್​​ ಕುಮಾರ್​ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಎಲ್ಲಾ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲಿದ್ದು, ಪೋಷಕರು ಆತಂಕಪಡುವ ಅಗತ್ಯವಿಲ್ಲ. ಮಕ್ಕಳು ಧೈರ್ಯವಾಗಿ ಬಂದು ಪರೀಕ್ಷೆ ಬರೆಯಲಿ. ಪೋಷಕರು ಮಕ್ಕಳನ್ನು ಯಾವುದೇ ಆತಂಕವಿಲ್ಲದೆ ಪರೀಕ್ಷೆಗೆ ಕಳುಹಿಸಿ ಅಂತ ಸಚಿವರು ತಿಳಿಸಿದರು.

By

Published : Jun 24, 2020, 12:54 PM IST

Published : Jun 24, 2020, 12:54 PM IST

centres
ಸಚಿವ ಸುರೇಶ್​​ ಕುಮಾರ್​​ ಪರಿಶೀಲನೆ

ಬೆಂಗಳೂರು:ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ SSLC ಪರೀಕ್ಷೆ ನಾಳೆಯಿಂದ ನಡೆಯಲಿದೆ. ನಾಳೆಯ ಪರೀಕ್ಷೆಗೆ ಕೌಂಟ್​​ಡೌನ್ ಶುರುವಾಗಿದ್ದು, ಪರೀಕ್ಷಾ ಕೇಂದ್ರದ ಸಿದ್ಧತೆಗಳನ್ನು ಸಚಿವ ಎಸ್.ಸುರೇಶ್ ಕುಮಾರ್ ಖುದ್ದು ಪರಿಶೀಲಿಸಿದರು.

ಮಲ್ಲೇಶ್ವರಂನ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಎಸ್‌. ಸುರೇಶ್​​ ಕುಮಾರ್ ಭೇಟಿ ನೀಡಿ​​ ಪರಿಶೀಲನೆ ನಡೆಸಿದರು.

‌ನಗರದ ಮಲ್ಲೇಶ್ವರಂನ ನಿರ್ಮಲಾ ರಾಣಿ ಕಾಲೇಜಿಗೆ ಭೇಟಿ ನೀಡಿದ ಸಚಿವರು, ಪರೀಕ್ಷಾ ಕೇಂದ್ರಗಳಿಗೆ ಔಷಧಿ ಸಿಂಪಡಣೆ ಮಾಡಿರುವುದನ್ನು ಖಚಿತಪಡಿಸಿಕೊಂಡರು. ಇದೇ ವೇಳೆ ಶಾಲಾ ಗೇಟ್​​ನಲ್ಲಿ ಸಚಿವರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಹ್ಯಾಂಡ್ ಸ್ಯಾನಿಟೈಸರ್ ನೀಡಲಾಯಿತು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆವರಣದ ಒಳಗೆ ಮತ್ತು ಹೊರಗೆ ಅಂತರ ಕಾಯ್ದುಕೊಳ್ಳುವ ಬಾಕ್ಸ್‌​​ಗಳನ್ನು ಹಾಕುವಲ್ಲಿ ಸಿಬ್ಬಂದಿ ನಿರತರಾಗಿದ್ದರು. ಕೇಂದ್ರದ ಪ್ರತಿ ತರಗತಿಗೂ ತೆರಳಿದ ಸುರೇಶ್‌ ಕುಮಾರ್‌ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‌ ವಿದ್ಯಾರ್ಥಿಗಳಿಗೆ ನಾವೇ ಮಾಸ್ಕ್ ನೀಡುತ್ತೇವೆ. ಕೇಂದ್ರದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.‌ ಈ ಹಿಂದಿನ ಬಾರಿ ಪಿಯು ಪರೀಕ್ಷೆಯಲ್ಲಾದ ತಪ್ಪುಗಳು ಮರುಕಳಿಸದು. ವಿದ್ಯಾರ್ಥಿಗಳು ಗುಂಪು ಸೇರದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದರು.

ಪರೀಕ್ಷಾ ಕೊಠಡಿಯಲ್ಲಿ ಜಿಗ್ ಜಾಗ್ ರೀತಿಯಲ್ಲಿ ಒಂದು ಬೆಂಚಿನಲ್ಲಿ ಒಬ್ಬ ವಿದ್ಯಾರ್ಥಿ ಕೂರಲು ಅನುವು ಮಾಡಿಕೊಡಲಾಗಿದೆ. ಹಾಲ್ ಟಿಕೆಟ್ ನೊಂದಿಗೆ ಮಾಸ್ಕ್​​ಗಳನ್ನು ನೀಡಲಾಗಿದೆ. ಒಂದು ವೇಳೆ ಮಾಸ್ಕ್‌ ಮರೆತು ಬಂದರೆ ಶಾಲಾ ಆವರಣದಲ್ಲಿ ಮಾಸ್ಕ್​​ ಅನ್ನು ವಿತರಣೆ ಮಾಡುವ ವ್ಯವಸ್ಥೆ ಇದೆ.

ಒಂದು ಕೊಠಡಿಯಲ್ಲಿ 18-20 ವಿದ್ಯಾರ್ಥಿಗಳು ಮಾತ್ರ ಕೂರಲಿದ್ದು, ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

For All Latest Updates

ABOUT THE AUTHOR

...view details