ಕರ್ನಾಟಕ

karnataka

ಸಿಎಂ ಸಂಪುಟದ ಮತ್ತೋರ್ವ ಸಚಿವರಿಗೆ ಕೋವಿಡ್ ದೃಢ

By

Published : Jan 11, 2022, 10:18 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸದಸ್ಯರನ್ನು ಕೊರೊನಾ ಕಾಡುತ್ತಿದೆ. ಇದೀಗ ಸಚಿವ ಎಸ್.​ಟಿ.ಸೋಮಶೇಖರ್ ಅವರಿಗೂ ಸೋಂಕು ತಗುಲಿದೆ.

ಸಚಿವ ಎಸ್​ಟಿ ಸೋಮಶೇಖರ್​ಗೆ ಕೋವಿಡ್
ಸಚಿವ ಎಸ್​ಟಿ ಸೋಮಶೇಖರ್​ಗೆ ಕೋವಿಡ್

ಬೆಂಗಳೂರು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್​ಗೆ ಕೊರೊನಾ ಸೋಂಕು ತಗುಲಿದ್ದು, ಹೋಂ ಐಸೋಲೇಷನ್​ನಲ್ಲಿದ್ದಾರೆ.

ಪಾಸಿಟಿವ್ ದೃಢಪಟ್ಟ ಬಗ್ಗೆ ಟ್ಚೀಟ್ ಮಾಡಿರುವ ಸಚಿವರು, ನನಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಂದಾಯ ಸಚಿವ ಆರ್.ಅಶೋಕ್, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಗೆ ಕೊರೊನಾ ದೃಢಪಟ್ಟಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಕೋವಿಡ್​ ಕೇಸ್ ಪತ್ತೆ: ಶೇ.10 ದಾಟಿತು ಪಾಸಿಟಿವಿಟಿ ರೇಟ್, ಬೆಂಗಳೂರಿಗೆ ಆಘಾತ!

ABOUT THE AUTHOR

...view details