ಬೆಂಗಳೂರು: ಸಚಿವ ಭೈರತಿ ಬಸವರಾಜ ಎನ್ಆರ್ಐ ಬಡವಾಣೆಯಲ್ಲಿ 35 ಎಕರೆ ಜಮೀನನ್ನು ನಕಲು ದಾಖಲು ಸೃಷ್ಟಿಸಿ ಮೊಸ ಮಾಡಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದು, ಇದೇ ವಿಚಾರವಾಗಿ ಅಧಿವೇಶನದಲ್ಲಿ ಕೋಲಾಹಲ ಉಂಟಾಗಿದೆ.
ಈ ವಿಚಾರವಾಗಿ ಭೂಮಿಯನ್ನು ಮಾರಿರುವ ಆದೂರು ಅಣ್ಣಯ್ಯಪ್ಪ ಕುಟುಂಬಸ್ಥರು ಇಂದು ಮಾಧ್ಯಮಗೋಷ್ಠಿ ನಡೆಸಿ, ಕಾಂಗ್ರೆಸ್ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ಪುರ ಕ್ಷೇತ್ರದ ಕಲ್ಕೆರೆ ಗ್ರಾಮದ ಎಂ. ಮಾದಪ್ಪರವರ ಮನೆಯಲ್ಲಿ ಆದೂರು ಅಣ್ಣಯ್ಯಪ್ಪ ಕುಟುಂಬದ ಕೊನೆಯ ಮಗ ಮಾದಪ್ಪ ಮಾತನಾಡಿ ಬೈರತಿ ಬಸವರಾಜ ಅವರು ನಮಗೆ ಯಾವುದೇ ಮೋಸ ಮಾಡಿಲ್ಲ. ಸಚಿವರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು. ನಮ್ಮ ಕುಟುಂಬದ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ನಾವೆಲ್ಲ ಸಹೋದರರು 2003ರಲ್ಲಿ ವಿಭಾಗೀಯ ಪತ್ರ ಮಾಡಿಕೊಂಡೆವು. 2013ರಲ್ಲಿ ಜಮೀನು ಮಾರಾಟ ಮಾಡಿದ್ದೇವೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸಚಿವರಾಗಿರುವ ಬೈರತಿ ಬಸವರಾಜ ಅವರು ನಮಗೆ ಅನ್ಯಾಯ ಮಾಡಿಲ್ಲ. ನಾವು ಎಲ್ಲಿ ಬೇಕಾದ್ರು ಇದನ್ನು ಹೇಳುತ್ತೇವೆ ಎಂದು ಕಲ್ಕೆರೆ ಗ್ರಾಮದ ಮಾದಪ್ಪ ಸ್ಪಷ್ಟಪಡಿಸಿದರು.