ಯಲಹಂಕ: ಸ್ಮಶಾನಕ್ಕೆ ಸಂಪರ್ಕಿಸುವ ರಸ್ತೆಯ ಒತ್ತುವರಿ ತೆರವು ಕಾರ್ಯಾಚರಣೆಗೆ ತೆರಳಿದ ತಹಶೀಲ್ದಾರ್ ಮೇಲೆ ವ್ಯಕ್ತಿಯೋರ್ವ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಸ್ಥಳದಲ್ಲಿಯೇ ಇದ್ದ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿದ ವ್ಯಕ್ತಿಗೆ ಗೂಸಾ ನೀಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಯಲಹಂಕದ ಬುಡುಮನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬಿ.ಆರ್ ಚಿಕ್ಕಣ್ಣ ಎನ್ನುವ ವ್ಯಕ್ತಿ ತನ್ನ ಜಮೀನು ಪಕ್ಕದಲ್ಲಿಯೇ ಇದ್ದ ಸ್ಮಶಾನಕ್ಕೆ ಸಂಪರ್ಕಿಸುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದ. ಇದರಿಂದ ಗ್ರಾಮಸ್ಥರು ಒಂದು ಕಿ.ಮೀ ಇದ್ದ ಸ್ಮಶಾನಕ್ಕೆ 6 ಕಿ.ಮೀ ಸುತ್ತಿ ಬಳಸಿ ಬರಬೇಕಿತ್ತು. ಇದಕ್ಕೆ ಸಂಬಂಧಪಟ್ಪಂತೆ ಕಂದಾಯ ಇಲಾಖೆಯ ಸಿಬ್ಬಂದಿ ಮೂರು ಬಾರಿ ತೆರವು ಮಾಡಲು ಬಂದಿದ್ದರು. ಈ ವೇಳೆ, ಚಿಕ್ಕಣ್ಣ ಮತ್ತು ಆತನ ಮಕ್ಕಳು ಸಿಂಬ್ಬದಿ ವಿರುದ್ಧ ಅವಾಚ್ಯ ಮಾತುಗಳಿಂದು ಬೈದು ತೆರವು ಮಾಡಲು ಅವಕಾಶ ನೀಡದೇ ವಾಪಸ್ ಕಳುಹಿಸಿದರು.