ಕರ್ನಾಟಕ

karnataka

ETV Bharat / city

'ಕೋರ್ಟ್ ಆವರಣದಲ್ಲಿ ಕೆಲವರು ನನ್ನ ಮೇಲೆ ಹಲ್ಲೆ‌': ವಕೀಲ ಜಗದೀಶ್ ಆರೋಪ - ವಕೀಲ ಜಗದೀಶ್ ಮೇಲೆ ಕೋರ್ಟ್​ನಲ್ಲೇ ಹಲ್ಲೆ

ವಕೀಯ ಜಗದೀಶ್​ ಅವರ ಪುತ್ರ ಮತ್ತು ಆಪ್ತರ ಮೇಲೆ ಸಿಟಿ ಸಿವಿಲ್ ಕೋರ್ಟ್​ ಆವರಣದಲ್ಲಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿಸಿದಂತೆ ಪ್ರಕರಣ ದಾಖಲಾಗಿದೆ.

Lawyer Jagadish assulted in bengaluru civil court
Lawyer Jagadish assulted in bengaluru civil court

By

Published : Feb 12, 2022, 1:02 AM IST

Updated : Feb 12, 2022, 1:16 AM IST

ಬೆಂಗಳೂರು:ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲ ಜಗದೀಶ್, ಮಗ ಮತ್ತು ಅವರ ಆಪ್ತರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಪ್ರಕರಣವೊಂದರ ಸಂಬಂಧ ಶುಕ್ರವಾರ ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್‌ಗೆ ದಾಖಲೆ ಸಲ್ಲಿಸಲು ಹೋದಾಗ ಕೆಲವರು ನನ್ನ ಮೇಲೆ, ಮಗ ಹಾಗೂ ನನ್ನ ಆಪ್ತರ ಮೇಲೆ ಹಲ್ಲೆ ನಡೆಸಿದ್ದಾರೆಂದು ಜಗದೀಶ್ ಆರೋಪಿಸಿದ್ದಾರೆ. ಇನ್ನು ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಶರತ್ ಖಾದ್ರಿ ಎಂಬುವವರು ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ಜಗದೀಶ್, ಪ್ರಕರಣ ಸಂಬಂಧ ಶುಕ್ರವಾರ ಬೆಳಗ್ಗೆ ದಾಖಲೆ ಸಲ್ಲಿಸಲು ಸಿಟಿ ಸಿವಿಲ್ ಕೋರ್ಟ್‌ಗೆ ಹೋಗಿದ್ದೆ. ನ್ಯಾಯಾಲಯದ ಆವರಣದಲ್ಲಿ ಕೆಲವರು ನನ್ನನ್ನ ತಡೆದು ನನ್ನ ಹಾಗೂ ನನ್ನೊಂದಿಗಿದ್ದ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

ಇದನ್ನೂ ಓದಿರಿ:ಹಿಜಾಬ್​ ವಿವಾದವನ್ನ ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ತಿದೆ: ಸಚಿವ ಬಿಸಿ ಪಾಟೀಲ್

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:ಕೋರ್ಟ್ ಆವರಣದಲ್ಲಿ ನನ್ನ ಮಗ ಮತ್ತು ಆಪ್ತರ ಮೇಲೆ ಗುಂಪೊಂದು ಹಲ್ಲೆ ಮಾಡಿದ್ದಾರೆ. ಇಷ್ಟಾದರೂ ಅಲ್ಲಿದ್ದ ಪೊಲೀಸರು ರಕ್ಷಣೆ ಮಾಡಿಲ್ಲ. ಎಲ್ಲರೂ ಗೂಂಡಾಗಳ ರೀತಿ ವರ್ತನೆ ಮಾಡಿದ್ದಾರೆಂದು ವಕೀಲ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Feb 12, 2022, 1:16 AM IST

ABOUT THE AUTHOR

...view details