ಬೆಂಗಳೂರು :ರಾಜಸ್ಥಾನದಲ್ಲಿ ಸ್ಥಿರ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿದೆ. ಅನಧಿಕೃತವಾಗಿ ಸರ್ಕಾರ ರಚನೆಗೆ ಹೊರಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ರಾಜಸ್ಥಾನ ಬಿಜೆಪಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಈಶ್ವರ್ ಖಂಡ್ರೆ - ಬೆಂಗಳೂರು ಸುದ್ದಿ
ಜನ ಕೊರೊನಾದಿಂದ ನರಳುತ್ತಿದ್ರೆ, ಚಿಕಿತ್ಸೆ ಕೊಡಲೂ ಯೋಗ್ಯತೆ ಇಲ್ಲದ ಪಕ್ಷಕ್ಕೆ ಜನರ ಜೀವಕ್ಕಿಂತ ಅಧಿಕಾರವೇ ದೊಡ್ಡದಾಗಿದೆ. ಇದು ಬಿಜೆಪಿಯ ನಿಜ ಬಣ್ಣ ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..
![ರಾಜಸ್ಥಾನ ಬಿಜೆಪಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಈಶ್ವರ್ ಖಂಡ್ರೆ KPCC President Ishwar Khandre tweet](https://etvbharatimages.akamaized.net/etvbharat/prod-images/768-512-8179964-257-8179964-1595760930263.jpg)
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜಾಸ್ಥಾನ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಬೇಕು. ಅವರು ಪಕ್ಷಪಾತ ರಹಿತರಾಗಿರಬೇಕೆ ಹೊರತು ಬಿಜೆಪಿ ಏಜೆಂಟರಂತೆ ಅಲ್ಲ. ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಬಿಜೆಪಿ ಚುನಾಯಿತ ಸರ್ಕಾರಗಳನ್ನು ಕೆಡವಿ, ತನ್ನ ಸರ್ಕಾರ ರಚಿಸಲು ಆಪರೇಷನ್ ಕಮಲವನ್ನು ದೇಶದಾದ್ಯಂತ ಮಾಡುತ್ತಿದೆ.
ಜನ ಕೊರೊನಾದಿಂದ ನರಳುತ್ತಿದ್ರೆ, ಚಿಕಿತ್ಸೆ ಕೊಡಲೂ ಯೋಗ್ಯತೆ ಇಲ್ಲದ ಪಕ್ಷಕ್ಕೆ ಜನರ ಜೀವಕ್ಕಿಂತ ಅಧಿಕಾರವೇ ದೊಡ್ಡದಾಗಿದೆ. ಇದು ಬಿಜೆಪಿಯ ನಿಜ ಬಣ್ಣ ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಳೆ ಮಧ್ಯಾಹ್ನ ರಾಜಭವನ ಮುಂಭಾಗ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.