ಕರ್ನಾಟಕ

karnataka

ETV Bharat / city

ಆಸ್ಪತ್ರೆಯಿಂದ ಕಂಪ್ಲಿ ಗಣೇಶ್​ ಡಿಸ್ಚಾರ್ಜ್: ಹುಲಿಗೆಮ್ಮನ ಸನ್ನಿಧಿಯಲ್ಲಿ ಪೂಜೆ - undefined

ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕನೊಂದಿಗೆ ಹೊಡೆದಾಡಿದ ಪ್ರಕರಣದಲ್ಲಿ ಶಾಸಕ ಕಂಪ್ಲಿ ಗಣೇಶ್​ಗೆ ಜಅಮೀನು ಸಿಕ್ಕಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದರು. ಆನಂತರ ಹೊಸಪೇಟೆಯಲ್ಲಿರುವ ಹುಲಿಯಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ಕಂಪ್ಲಿ ಗಣೇಶ್​

By

Published : Apr 25, 2019, 9:39 PM IST

ಬೆಂಗಳೂರು:ರೆಸಾರ್ಟ್​ನಲ್ಲಿ ಶಾಸಕ ಆನಂದ್​ ಸಿಂಗ್​ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಷರುತ್ತುಬದ್ಧ ಜಾಮೀನು ಪಡೆದ ಶಾಸಕ ಕಂಪ್ಲಿ ಗಣೇಶ್​ ಇಂದು ಕೆಲ ಷರತ್ತುಗಳನ್ನ ಪೊರೈಸಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.

ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ಹೊಸಪೇಟೆಯಲ್ಲಿರುವ ಹುಲಿಯಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ಶಾಸಕರನ್ನುಜೈಲಿಗೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಬೇಕಿತ್ತು. ಆದರೆ, ಜೈಲರ್ ರಾಮೇಶ್ ಆಸ್ಪತ್ರೆಯಲ್ಲೇ ಬಿಡುಗಡೆ ಭಾಗ್ಯ ಕಲ್ಪಿಸಿದ್ದಾರೆ ಎಂಬ ಮಾತುಗಳ ಸಹ ಕೇಳಿಬಂದಿವೆ.

ಕಂಪ್ಲಿ ಗಣೇಶ್​

ಕಂಪ್ಲಿ ಗಣೇಶ್ ಬಿಡುಗಡೆ ವಿಚಾರ ತಿಳಿದ ಅವರ ಕಾರ್ಯಕರ್ತರು ಹೂವಿಹಾರಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದೌಡಾಯಿಸಿದರು.

ನಿನ್ನೆ ಕಂಪ್ಲಿ ಗಣೇಶ್​ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಅದರಂತೆ ಗಣೇಶ್ ವಿಚಾರಣೆ ವೇಳೆ​ ಪೊಲೀಸ್ ಠಾಣೆಗೆ ಹಾಜರಾಗಬೇಕು. ಅಂತೆಯೆ ದೇಶ ಬಿಟ್ಟು ಹೋಗುವಂತಿಲ್ಲ ಎಂಬ ನಿರ್ಬಂಧಗಳಿವೆ.

For All Latest Updates

TAGGED:

ABOUT THE AUTHOR

...view details