ಬೆಂಗಳೂರು : ಅಭಿವೃದ್ಧಿ ಕಾಮಗಾರಿ ವಿಳಂಬ ವಿಚಾರವಾಗಿ ಚರ್ಚೆಗೆ ಅವಕಾಶ ಕೋರಿ ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿರಸ್ಕರಿಸಿದ್ದರಿಂದ ಜೆಡಿಎಸ್ ಸದಸ್ಯರು ವಿಧಾನಸಭೆ ಅಧವೇಶನದಲ್ಲಿ ಧರಣಿ ನಡೆಸಿದ ಪ್ರಸಂಗ ನಡೆಯಿತು.
ಚರ್ಚೆಗೆ ಅವಕಾಶ ಕೋರಿದ್ದ ನಿಲುವಳಿ ಸೂಚನೆ ತಿರಸ್ಕಾರ ; ಸದನದ ಬಾವಿಗಿಳಿದು ಜೆಡಿಎಸ್ ಧರಣಿ - ವಿಧಾನಸಭೆ ಅಧಿವೇಶನದಲ್ಲಿ ಜೆಡಿಎಸ್ ಧರಣಿ
ಇದಕ್ಕೆಲ್ಲಾ ಧರಣಿ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಮೊದಲು ಹೇಳುವುದನ್ನು ಕೇಳಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿಟ್ಟಾದರು. ನಿಯಮ 69ರ ಅಡಿ ಬದಲಿಸಿ ಮತ್ತೆ ಬರೆದುಕೊಡಿ, ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದಾಗ ಜೆಡಿಎಸ್ ಸದಸ್ಯರು ಧರಣಿಯನ್ನು ವಾಪಸು ಪಡೆದರು..

ಚರ್ಚೆಗೆ ಅವಕಾಶ ಕೋರಿದ್ದ ನಿಲುವಳಿ ಸೂಚನೆ ತಿರಸ್ಕಾರ; ಸದನದ ಬಾವಿಗಿಳಿದು ಜೆಡಿಎಸ್ ಧರಣಿ
ಚರ್ಚೆಗೆ ಅವಕಾಶ ಕೋರಿದ್ದ ನಿಲುವಳಿ ಸೂಚನೆ ತಿರಸ್ಕಾರ ; ಸದನದ ಬಾವಿಗಿಳಿದು ಜೆಡಿಎಸ್ ಧರಣಿ
ನಿಯಮ 60ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮನವಿ ಸಲ್ಲಿಸಿದ್ದರು. ಆದರೆ, ನಿಲುವಳಿ ಸೂಚನೆಯನ್ನು ಸ್ಪೀಕರ್ ತಿರಸ್ಕರಿಸಿದರು. ನಿಯಮ 69ಕ್ಕೆ ಬರೆದುಕೊಂಡುವಂತೆ ಸೂಚನೆ ನೀಡಿದರು. ಆದರೆ, ಇದಕ್ಕೆ ಒಪ್ಪದೆ ಸದನದ ಬಾವಿಗೆ ಇಳಿದು ಜೆಡಿಎಸ್ ಸದಸ್ಯರು ಧರಣಿ ನಡೆಸಿದರು.
ಸಿಟ್ಟಾದ ಸ್ಪೀಕರ್ :ಇದಕ್ಕೆಲ್ಲಾ ಧರಣಿ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಮೊದಲು ಹೇಳುವುದನ್ನು ಕೇಳಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿಟ್ಟಾದರು. ನಿಯಮ 69ರ ಅಡಿ ಬದಲಿಸಿ ಮತ್ತೆ ಬರೆದುಕೊಡಿ, ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದಾಗ ಜೆಡಿಎಸ್ ಸದಸ್ಯರು ಧರಣಿಯನ್ನು ವಾಪಸು ಪಡೆದರು.