ಕರ್ನಾಟಕ

karnataka

ETV Bharat / city

ಕಾಂಗ್ರೆಸ್ ಮತಬ್ಯಾಂಕ್ ಸೆಳೆಯಲು ಜೆಡಿಎಸ್​ಗೆ ಹೊಸ ಸಾರಥಿ; ಕೆಪಿಸಿಸಿ ಅಧ್ಯಕ್ಷರ ಮೇಲೆ ಹೆಚ್ಚುವುದೇ ಒತ್ತಡ!? - H. D. Kumaraswamy Former Chief minister of Karnataka

ಜೆಡಿಯಸ್​ ದಿನೇದಿನೆ ಹೂಡುತ್ತಿರುವ ತಂತ್ರ ಕಾಂಗ್ರೆಸ್​ಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಜೆಡಿಎಸ್​ನ ನೂತನ ರಾಜ್ಯಾಧ್ಯಕ್ಷರಿಂದ ಕಾಂಗ್ರೆಸ್​ನ ಮತ ಬ್ಯಾಂಕ್​ಗೆ ಸಮಸ್ಯೆಯಾಗಲಿದೆ ಎಂದು ರಾಜಕೀಯ ವಿಶ್ಲೇಷಣೆಗಳು ಬರುತ್ತಿವೆ..

JDS party taking lead in A minority vote: Congress vote bank stolen by jds
ಕಾಂಗ್ರೆಸ್ ಮತಬ್ಯಾಂಕ್ ಸೆಳೆಯಲು ಜೆಡಿಎಸ್​ಗೆ ಹೊಸ ಸಾರಥಿ; ಕೆಪಿಸಿಸಿ ಅಧ್ಯಕ್ಷರ ಮೇಲೆ ಹೆಚ್ಚುವುದೇ ಒತ್ತಡ?!

By

Published : Apr 20, 2022, 7:53 PM IST

ಬೆಂಗಳೂರು :ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುವ ಜವಾಬ್ದಾರಿ ವಹಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಹೊಸದೊಂದು ಸವಾಲು ಎದುರಾಗಿದೆ. ಕಾಂಗ್ರೆಸ್​ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದ್ದ ಮುಸಲ್ಮಾನ್ ಸಮುದಾಯ ಇದೀಗ ಜೆಡಿಎಸ್ ಕಡೆ ವಾಲುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ದೊಡ್ಡಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆ ಆರಂಭಿಸಿದ್ದಾರೆ.

ಇನ್ನೊಂದೆಡೆ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಸಿಎಂ ಇಬ್ರಾಹಿಂರನ್ನು ನೇಮಕ ಮಾಡಿದ್ದಾರೆ. ಕುಮಾರಸ್ವಾಮಿ ಆಡುತ್ತಿರುವ ಓಲೈಕೆಯ ಮಾತುಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಸಿಎಂ ಇಬ್ರಾಹಿಂ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಕಾಂಗ್ರೆಸ್ ನಾಯಕರನ್ನು ಸೆಳೆಯಲು ನಡೆಸುತ್ತಿರುವ ಪ್ರಯತ್ನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಒಂದಿಷ್ಟು ಆತಂಕದ ಸ್ಥಿತಿ ನಿರ್ಮಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಎರಡೂವರೆ ವರ್ಷಗಳ ಬಳಿಕ ಕೆಪಿಸಿಸಿಗೆ ಪದಾಧಿಕಾರಿಗಳನ್ನು ನೇಮಿಸಿಕೊಂಡಿರುವ ಡಿ.ಕೆ. ಶಿವಕುಮಾರ್​ಗೆ ಪಕ್ಷ ಬಲಪಡಿಸುವ ಹೊಣೆಗಾರಿಕೆಯನ್ನು ನೀಡಲಾಗಿದೆ. ಜಿಲ್ಲೆ ಹಾಗೂ ತಾಲೂಕುಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಹುರಿದುಂಬಿಸುವ ಹಾಗೂ ಅವರಿಗೆ ಜವಾಬ್ದಾರಿಗಳನ್ನು ನೀಡಿ ಉತ್ತೇಜಿಸುವ ಅವಕಾಶ ಡಿಕೆಶಿಗೆ ಅಷ್ಟಾಗಿ ಲಭಿಸಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಮಾಡಲಾಗದ ಕಾರ್ಯವನ್ನು ಚುನಾವಣೆ ವರ್ಷದಲ್ಲಿ ಮಾಡುವ ಒತ್ತಡ ಎದುರಾಗಿದೆ.

ಮತ ಬ್ಯಾಂಕ್​ ಕಳೆದುಕೊಳ್ಳುವ ಚಿಂತೆಯಲ್ಲಿ ಕಾಂಗ್ರೆಸ್ ​: 2023ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸಬೇಕು. ಇರುವ ಡಿಕೆಶಿಗೆ ಇದೀಗ ಜೆಡಿಎಸ್ ಮಗ್ಗುಲ ಮುಳ್ಳಾಗಿ ಕಾಡಿದೆ. ಒಂದೆಡೆ ಕುಮಾರಸ್ವಾಮಿ ಅಲ್ಪಸಂಖ್ಯಾತರ ಪರ ಅಖಾಡಕ್ಕಿಳಿದಿದ್ದಾರೆ. ಆಡಳಿತ ಪಕ್ಷ ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದಾರೆ. ಇನ್ನೊಂದೆಡೆ ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಸಿಎಂ ಇಬ್ರಾಹಿಂ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಹಾಗೂ ಮಾಜಿ ಶಾಸಕರು ಹಾಗೂ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಒಂದೆಡೆ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಗೆ ಕಾಂಗ್ರೆಸ್ ಪಕ್ಷದ ನಾಯಕರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಇನ್ನೊಂದೆಡೆ ಸಾಂಪ್ರದಾಯಿಕ ಮತಬ್ಯಾಂಕ್ ಕಳೆದುಕೊಳ್ಳುವ ಆತಂಕವೂ ಎದುರಾಗುತ್ತಿದೆ.

ಕುಮಾರಸ್ವಾಮಿ

ಜೆಡಿಎಸ್​ನಿಂದ ಕಾಂಗ್ರೆಸ್​ ನಾಯಕರಿಗೆ ಗಾಳ : ಒಂದೆಡೆ ಶಿವಾಜಿನಗರ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಬಹುತೇಕ ಜೆಡಿಎಸ್​ಗೆ ಕಾಲಿಟ್ಟಿದ್ದಾರೆ. ಬೇಗ್​ ಕಳೆದ ವಿಧಾನಸಭೆ ಉಪ ಚುನಾವಣೆ ವೇಳೆ ತಟಸ್ಥವಾಗಿ ಉಳಿದಿದ್ದರು. ಆದರೆ, ಈಗ ಜೆಡಿಎಸ್ ಕೈ ಬಲಪಡಿಸಲು ಮುಂದಾಗಿರುವುದು ಸಹಜವಾಗಿ ಡಿಕೆಶಿಗೆ ಆತಂಕ ತರಿಸಿದೆ. ಮತ್ತೊಂದೆಡೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್​ರನ್ನು ಸೆಳೆಯುವ ಪ್ರಯತ್ನವನ್ನು ಇಬ್ರಾಹಿಂ ನಡೆಸಿದ್ದಾರೆ. ಜೊತೆಜೊತೆಗೆ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅನ್ನು ಜೆಡಿಎಸ್​ಗೆ ವಾಪಸ್ ಕರೆತರುವ ನಿಟ್ಟಿನಲ್ಲಿ ಇಬ್ರಾಹಿಂ ಪ್ರಯತ್ನ ಮುಂದುವರಿಸಿದ್ದಾರೆ ಎಂಬ ಮಾಹಿತಿ ಇದೆ.

ಆಂತರಿಕ ಗೊಂದಲ ಮತ್ತು ಅಸಹಕಾರ : ಕಾಂಗ್ರೆಸ್​ ಹಿಂದುಳಿದ ವರ್ಗಗಳ ಮತವನ್ನು ಈಗಾಗಲೇ ಬಿಜೆಪಿ ಸೆಳೆದುಕೊಳ್ಳಲು ಗಾಳ ಹಾಕಿಕೊಂಡು ಕಾಯುತ್ತಿದೆ. ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಮತವನ್ನು ಜೆಡಿಎಸ್ ಸೆಳೆದರೆ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಸಂದರ್ಭ ಕಾಂಗ್ರೆಸ್ಸಿಗೆ ಸಾಕಷ್ಟು ತೊಡಕುಗಳು ಎದುರಾಗಲಿವೆ. ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲಗಳು ಹಾಗೂ ಅಸಹಕಾರದ ನಡುವೆ ಇದೀಗ ಪಕ್ಷದ ಮತದಾರರ ಸಮುದಾಯವನ್ನು ಸೆಳೆಯುವ ಪ್ರಯತ್ನ ಸಹ ಆರಂಭವಾಗಿರುವುದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ಸಹಜವಾಗಿ ಒತ್ತಡವನ್ನೂ ಹೆಚ್ಚಿಸಿದೆ.

ಸಿಎಂ ಇಬ್ರಾಹಿಂ

ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಮುನ್ನ ಪಕ್ಷದ ಹೈಕಮಾಂಡ್ ನಾಯಕರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವ ಭರವಸೆ ನೀಡಿರುವ ಡಿ.ಕೆ. ಶಿವಕುಮಾರ್​ಗೆ ಇದೀಗ ಜೆಡಿಎಸ್ ಪಕ್ಷದ ಸವಾಲು ಸಾಕಷ್ಟು ದೊಡ್ಡ ಮಟ್ಟದ ಒತ್ತಡವನ್ನು ತರುತ್ತಿದೆ. ಪಕ್ಷವನ್ನು ಅಧಿಕಾರಕ್ಕೆ ತರುವುದು ಇರಲಿ ಕಳೆದ ಸಾಲಿಗಿಂತ ಕಡಿಮೆ ಸ್ಥಾನವನ್ನು ಪಡೆಯುವ ಆತಂಕ ಸಹ ಎದುರಾಗಿದೆ. ಇದಕ್ಕೆಲ್ಲ ಶಿವಕುಮಾರ್ ಯಾವ ರೀತಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:ಕೋವಿಡ್​​ ನಾಲ್ಕನೇ ಅಲೆ ಭೀತಿಯಲ್ಲಿ ಇದೆಯೇ ಭಾರತ? ತಜ್ಞರು ಹೇಳುವುದೇನು?

ABOUT THE AUTHOR

...view details