ಕರ್ನಾಟಕ

karnataka

ETV Bharat / city

ಕೆಎಸ್ಆರ್​ಪಿಯಿಂದ ಮಹಿಳಾ ದಿನಾಚರಣೆ: ಇಲಾಖೆಯ ಮಹಿಳಾ ಸಾಧಕರಿಗೆ ಪುರಸ್ಕಾರ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಕೋರಮಂಗಲದ ಕೆಎಎಸ್ಆರ್​ಪಿ ಪೊಲೀಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಸ್ವಯಂ ರಕ್ಷಣಾ ಮತ್ತು ಕೌಶಲ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 2014ರಲ್ಲಿ ದಕ್ಷಿಣ ಕೊರಿಯಾ ಏಷಿಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿ ಸುಶ್ಮಿತಾ ಪವಾರ್ ಹಾಗೂ ಜಯಂತಿ ಅವರಿಗೆ 3 ಲಕ್ಷ ರೂಪಾಯಿ ಚೆಕ್ ವಿತರಿಸಿ ಪುರಸ್ಕರಿಸಿದರು.

By

Published : Mar 8, 2022, 4:27 PM IST

Home Minister Araga Jnanendra honoured KSRP Women Acheivers
ಕೆಎಸ್ಆರ್​ಪಿಯಿಂದ ಮಹಿಳಾ ದಿನಾಚರಣೆ: ಇಲಾಖೆಯ ಮಹಿಳಾ ಸಾಧಕರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಚೆಕ್​ ನೀಡಿ ಗೌರವಿಸಿದರು.

ಬೆಂಗಳೂರು:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಕೋರಮಂಗಲದ ಕೆಎಎಸ್ಆರ್​ಪಿ ಪೊಲೀಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಸ್ವಯಂ ರಕ್ಷಣಾ ಮತ್ತು ಕೌಶಲ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕರ್ನಾಟಕ ರಾಜ್ಯ ಮೀಸಲು ಪೊಲೀಸರಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್, ಕೆಎಸ್ಆರ್​ಪಿ ಪೊಲೀಸ್ ಮಹಾ ನಿರೀಕ್ಷಕ ರವಿ ಎಸ್., ಕೆಎಸ್ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಭಾಗಿಯಾಗಿದ್ದರು.

ಕೆಎಸ್ಆರ್​ಪಿಯಿಂದ ಮಹಿಳಾ ದಿನಾಚರಣೆ: ಇಲಾಖೆಯ ಮಹಿಳಾ ಸಾಧಕರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಚೆಕ್​ ನೀಡಿ ಗೌರವಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೆಎಸ್ಆರ್​ಪಿ ಸಮುದಾಯ ಭವನ ಉದ್ಘಾಟಿಸಿದ ಬಳಿಕ 2014ರ ದಕ್ಷಿಣ ಕೊರಿಯಾ ಏಷಿಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಜ್ಯ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿ ಸುಶ್ಮಿತಾ ಪವಾರ್ ಹಾಗೂ ಜಯಂತಿ ಅವರಿಗೆ ಮೂರು ಲಕ್ಷ ರೂಪಾಯಿ ಚೆಕ್ ವಿತರಿಸಿ ಪುರಸ್ಕರಿಸಿದರು.

ABOUT THE AUTHOR

...view details