ಕರ್ನಾಟಕ

karnataka

By

Published : May 24, 2019, 10:13 AM IST

ETV Bharat / city

ಜೆಡಿಎಸ್ ಈ ಸ್ಥಿತಿಗೆ ಮೈತ್ರಿ ಒಳಜಗಳವೇ ಕಾರಣ ಎಂದ್ರು ಜೆಡಿಎಸ್​​ನ ಈ ನಾಯಕ

ಲೋಕ ಸಮರದ ಫಲಿತಾಂಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿ ಗೆದ್ದು ಬೀಗಿದೆ. ರಾಜ್ಯದಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದು, 25 ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಇನ್ನು ಈ ಹಿನ್ನಡೆಗೆ ಒಂದು ರೀತಿಯಲ್ಲಿ ಮೈತ್ರಿಯಲ್ಲಿನ ಒಳಜಗಳವೇ ಕಾರಣ ಎಂದು ಜೆಡಿಎಸ್​​​ ಮುಖಂಡ ಬಿ ಎಂ ಫಾರೂಕ್​ ಹೇಳಿದ್ದಾರೆ.

ಬಿ ಎಂ ಫಾರೂಕ್

ಬೆಂಗಳೂರು:ಚುನಾವಣೆಯಲ್ಲಿ ಜೆಡಿಎಸ್ ​ಹಿನ್ನಡೆ ಅನುಭವಿಸಲು ಮೈತ್ರಿಯಲ್ಲಿನ ಒಳಜಗಳವೇ ಕಾರಣ ಎಂದು ಜೆಡಿಯಸ್​ ಮುಖಂಡ ಬಿ ಎಂ ಫಾರೂಕ್ ಹೇಳಿದ್ದಾರೆ.

ಇನ್ನು ಮುಖ್ಯವಾಗಿ ಬಿಜೆಪಿಯ ಈ ಮುನ್ನಡೆಗೆ ಪುಲ್ವಾಮ ಹಾಗೂ ಬಾಲಾಕೋಟ್ ದಾಳಿ ಕಾರಣ. ಉತ್ತರದ ಹಿಂದಿ ರಾಜ್ಯಗಳಲ್ಲಿ ಈ ದಾಳಿ ತುಂಬಾ ಪ್ರಭಾವ ಬೀರಿದೆ ಎಂದಿದ್ದಾರೆ.

ಜೆಡಿಎಸ್​​ನ ನಾಯಕ ಬಿ ಎಂ ಫಾರೂಕ್

ಫಲಿತಾಂಶದಲ್ಲಿ ರಾಜ್ಯ ಸೇರಿದಂತೆ ದೇಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿ ಗೆದ್ದು ಬೀಗಿದೆ. ರಾಜ್ಯದಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ತಲಾ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

For All Latest Updates

TAGGED:

ABOUT THE AUTHOR

...view details