ಕರ್ನಾಟಕ

karnataka

By

Published : Oct 4, 2019, 10:56 AM IST

Updated : Oct 4, 2019, 3:23 PM IST

ETV Bharat / city

ಏಯ್‌, ಹುಡುಗಿ ಐ ಲವ್‌ಯೂ.. ಬೀದಿ ಕಾಮಣ್ಣನಂತೆ ಪ್ರಪೋಸ್‌ ಮಾಡಿದ ಹುಚ್ಚ ವೆಂಕಟ್..

ಇಂದು ಬೆಳಗ್ಗೆ ದೊಡ್ಡಬಳ್ಳಾಪುರದಿಂದ ಬೆಂಗಳೂರು ಕಡೆ ಕಾರಿನಲ್ಲಿ ಹೊರಟ್ಟಿದ್ದ ಹುಚ್ಚ ವೆಂಕಟ್, ಮಾರಸಂದ್ರ ಟೋಲ್ ಗೇಟ್ ಬಳಿ ಕಾಲೇಜಿಗೆ ಹೋಗಲೆಂದು ಒಂಟಿ ಹುಡುಗಿ ಬಸ್​ಗೆ ಕಾಯುತ್ತಿದ್ದಾಗ, ಅಲ್ಲಿ ಕಾರು ನಿಲ್ಲಿಸಿ, ಹುಡುಗಿ ಐ ಲವ್ ಯೂ... ಎಂದು ಪ್ರಪೋಸ್ ಮಾಡಿ ಹುಚ್ಚಾಟ ಮೆರಿದಿದ್ದಾನೆ.

ಹುಚ್ಚ ವೆಂಕಟ್​​

ದೊಡ್ಡಬಳ್ಳಾಪುರ:ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯ ಮಾರಸಂದ್ರ ಟೋಲ್ ಗೇಟ್​ ಇಂದು ಹುಚ್ಚ ವೆಂಕಟ್​ನ ಹುಚ್ಚಾಟಕ್ಕೆ ಸಾಕ್ಷಿಯಾಯಿತು. ಟೋಲ್ ಗೇಟ್​​​ ಬಳಿ ಬಸ್​​ಗೆ ಕಾಯುತ್ತಿದ್ದ ಕಾಲೇಜು ಹುಡುಗಿಗೆ ಲವ್ ಪ್ರಪೋಸ್ ಮಾಡಿ ವೆಂಕಟ್‌ ಹುಚ್ಚಾಟ ಮೆರೆದಿದ್ದಾನೆ.

ಇಂದು ಬೆಳಗ್ಗೆ ದೊಡ್ಡಬಳ್ಳಾಪುರದಿಂದ ಬೆಂಗಳೂರು ಕಡೆ ಕಾರಿನಲ್ಲಿ ಹೊರಟ್ಟಿದ್ದ ಹುಚ್ಚ ವೆಂಕಟ್, ಮಾರಸಂದ್ರ ಟೋಲ್ ಬಳಿ ಕಾಲೇಜಿಗೆ ಹೋಗಲೆಂದು ಒಂಟಿ ಹುಡುಗಿ ಬಸ್​ಗೆ ಕಾಯುತ್ತಿದ್ದಾಗ, ಅಲ್ಲಿ ಕಾರು ನಿಲ್ಲಿಸಿ, ಹುಡುಗಿ ಐ ಲವ್ ಯೂ.. ಎಂದು ಪ್ರಪೋಸ್ ಮಾಡಿದ್ದಾನೆ.

ಹುಚ್ಚ ವೆಂಕಟನ ಬಗ್ಗೆ ಮೊದಲೇ ತಿಳಿದಿದ್ದ ಹುಡುಗಿ ಮೊದಲಿಗೆ ಕಾಮಿಡಿ ಮಾಡ್ತಾ ಇದ್ದಾನೆ ಎಂದುಕೊಂಡು ಸುಮ್ಮನಾಗಿದ್ದಳು. ಆದರೆ, ವೆಂಕಟ್ ಯಾವಾಗ ಆಕೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ, ತನ್ನ ಮದುವೆಯಾಗುವಂತೆ ಕಾಡಲು ಶುರು ಮಾಡಿದನೋ ಆಗ ಆ ಹುಡುಗಿ ಹೆದರಿ ತನ್ನ ಸಂಬಂಧಿಕರಿಗೆ ಪೋನ್ ಮಾಡಿ ಅಲ್ಲಿಂದ ತೆರಳಿದ್ದಾಳೆ.

ಹುಚ್ಚ ವೆಂಕಟ್​​ನ ಪ್ರೇಮದ ಹುಚ್ಚಾಟ... ಬಸ್​ಗೆ ಕಾಯುತ್ತಿದ್ದ ಹುಡುಗಿಗೆ ಲವ್ ಪ್ರಪೋಸ್​

ಇದರಿಂದ ಕೋಪಗೊಂಡ ವೆಂಕಟ್ ತನ್ನ ಕಾರಿನ ಮುಂಭಾಗದ ಗ್ಲಾಸ್​ಗೆ ಕಲ್ಲಿನಿಂದ ಹೊಡೆದಿದ್ದಾನೆ. ಅಷ್ಟೊತ್ತಿಗೆ ಆತನ ಹುಚ್ಚಾಟ ನೋಡಲು ಜನ ಸಾಗರವೇ ಅಲ್ಲಿ ಸೇರಿತ್ತು. ತನ್ನ ಪರ್ಸ್ ಕಳ್ಕೊಂಡಿದ್ದ ವೆಂಕಟ್​​ಗೆ ಜನರೇ ಹಣ ಕೊಟ್ಟರು. ಸ್ಥಳಕ್ಕೆ ಬಂದ ರಾಜನುಕುಂಟೆ ಪೊಲೀಸರು ಅಲ್ಲಿಂದ ಹುಚ್ಚ ವೆಂಕಟ್​​ನನ್ನ ಕರೆದುಕೊಂಡು ಹೋದರು.

Last Updated : Oct 4, 2019, 3:23 PM IST

ABOUT THE AUTHOR

...view details