ಕರ್ನಾಟಕ

karnataka

ETV Bharat / city

ಹೊಸಕೋಟೆ ಉಪ ಕದನ: ಶಾಂತಿ ಕದಡುವರಿಗೆ ಎಚ್ಚರಿಕೆ ನೀಡಿದ ಚನ್ನಣ್ಣನವರ್ - ಹೊಸಕೋಟೆ ನಗರದಾದ್ಯಂತ ಪಥಸಂಚಲನ

ನಾಳೆ ಮತದಾನದ ದಿನವಾಗಿದ್ದು ಹೈವೋಲ್ಟೇಜ್ ಕ್ಷೇತ್ರ ಹೊಸಕೋಟೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಮುಂಜಾಗ್ರತ ಕ್ರಮವಾಗಿ ಪಥ ಸಂಚಲನ ನಡೆಸಿವೆ.

Kn_Bng_02_ElectionPolicebadrathe_vis_KA10002
ಹೊಸಕೋಟೆ ಉಪಚುನಾವಣಾ ಕದನ: ಶಾಂತಿ ಕದಡುವರಿಗೆ ಎಚ್ಚರಿಕೆ ನೀಡಿದ ಚನ್ನಣ್ಣನವರ್

By

Published : Dec 4, 2019, 9:38 PM IST

ಹೊಸಕೋಟೆ:ನಾಳೆ ಮತದಾನದ ದಿನವಾಗಿದ್ದುಹೈವೋಲ್ಟೇಜ್ ಕ್ಷೇತ್ರವೆನಿಸಿರುವ ಹೊಸಕೋಟೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಮುಂಜಾಗ್ರತ ಕ್ರಮವಾಗಿ ಪಥ ಸಂಚಲನ ನಡೆಸಿವೆ.

ಉಪ ಚುನಾವಣಾ ಮತದಾನ ನಾಳೆ ನಡೆಯಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ, ಅರೆಸೇನಾ ಪಡೆಯನ್ನ ನಿಯೋಜಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ಹಾಗೂ 1000 ಕ್ಕೂ ಹೆಚ್ಚು ಹೋಮ್ ಗಾರ್ಡ್​ಗಳ ನಿಯೋಜನೆ ಮಾಡಲಾಗಿದೆ. ಅದರಲ್ಲಿ 5 ಜನ ಡಿವೈಎಸ್ಪಿಗಳು, 10 ಜನ ವೃತ್ತ ನಿರೀಕ್ಷರು ಪ್ಯಾರಾ ಮಿಲಿಟರಿ, 4 ಡಿಆರ್ ಮತ್ತು 4 ಕೆಎಸ್​ಆರ್​ಪಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಹೊಸಕೋಟೆ ಉಪಚುನಾವಣಾ ಕದನ: ಶಾಂತಿ ಕದಡುವರಿಗೆ ಎಚ್ಚರಿಕೆ ನೀಡಿದ ಚನ್ನಣ್ಣನವರ್

ಜತೆಗೆ ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿರೋ ಎಸ್‌ಪಿ ಯಾವುದೇ ರೀತಿ ಶಾಂತಿಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಜನರಲ್ಲಿ ಯಾವುದೇ ರೀತಿ ಭಯದ ವಾತಾವರಣ ಇರಬಾರದೆಂದು ಪೊಲೀಸ್ ಪಡೆಗಳು ಹೊಸಕೋಟೆ ನಗರದಾದ್ಯಂತ ಪಥಸಂಚಲನ ನಡೆಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರನ್ನ ಮುಲಾಜೀಲ್ಲದೆ ಕೇಸ್ ಮಾಡಬೇಕಾಗುತ್ತದೆ ಅಂತ ಖಡಕ್ ಸಂದೇಶ ರವಾನಿಸಿದ್ದಾರೆ.

ABOUT THE AUTHOR

...view details