ಬೆಂಗಳೂರು: ಹೊಸ ವರ್ಷಾಚಾರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಭದ್ರತೆಯ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಸಿಹಿ ಹಂಚಿ ಶುಭಾಶಯ ಕೋರಿದರು.
ಬೆಂಗಳೂರಿನ ಎಂಜಿ ರಸ್ತೆಗೆ ಭೇಟಿ ನೀಡಿದ ಗೃಹ ಸಚಿವ: ಪೊಲೀಸರಿಗೆ ಸಿಹಿ ಹಂಚಿ ಶುಭಾಶಯ - ಎಂಜಿ ರಸ್ತೆಗೆ ಅರಗ ಜ್ಞಾನೇಂದ್ರ ಭೇಟಿ
ಗೃಹ ಸಚಿವ ಅರಗ ಜ್ಞಾನೇಂದ್ರ ಬೆಂಗಳೂರಿನ ಎಂಜಿ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದೇ ವೇಳೆ ಭದ್ರತೆಯ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಸಿಹಿ ಹಂಚಿ ಶುಭಾಶಯ ಕೋರಿದರು.
![ಬೆಂಗಳೂರಿನ ಎಂಜಿ ರಸ್ತೆಗೆ ಭೇಟಿ ನೀಡಿದ ಗೃಹ ಸಚಿವ: ಪೊಲೀಸರಿಗೆ ಸಿಹಿ ಹಂಚಿ ಶುಭಾಶಯ Home minister visited Bengaluru MG Road](https://etvbharatimages.akamaized.net/etvbharat/prod-images/768-512-14063452-thumbnail-3x2-raaaa.jpg)
ಬೆಂಗಳೂರಿನ ಎಂಜಿ ರಸ್ತೆಗೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ
ಈ ವೇಳೆ ಮಾತನಾಡಿದ ಅವರು ನೈಟ್ ಕರ್ಫ್ಯೂ ಜಾರಿ ಯಶಸ್ವಿಯಾಗಿದೆ. ಜನರೂ ಕೂಡಾ ಪೊಲೀಸರಿಗೆ ಬೆಂಬಲ ಸೂಚಿಸಿದ್ದಾರೆ. ಜನರ ಸಹಕಾರದಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇದು ಅತ್ಯಂತ ಖುಷಿ ವಿಚಾರ ಎಂದು ಅರಗ ಜ್ಞಾನೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನೈಟ್ ಕರ್ಫ್ಯೂ ಎಫೆಕ್ಟ್ ; ಜನ ಸಂಚಾರವಿಲ್ಲದೆ ಸ್ತಬ್ಧವಾದ ಎಂ.ಜಿ.ರೋಡ್