ಕರ್ನಾಟಕ

karnataka

ETV Bharat / city

ಕೋವಿಡ್ ತೀವ್ರತೆ ಇಳಿಕೆ: ಸೆರೋ ಸಮೀಕ್ಷೆ ನಡೆಸಲು ಆರೋಗ್ಯ ಇಲಾಖೆ ಚಿಂತನೆ - ಸೆರೋ ಸರ್ವೇಗೆ ಸರ್ಕಾರ ಚಿಂತನೆ

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯು ಅಪ್ಪಳಿಸಿ ಇದೀಗ ಅದರ ತೀವ್ರತೆ ಗಣನೀಯವಾಗಿ ಕುಸಿದಿದೆ. ಇದರಿಂದ ರಾಜ್ಯದಲ್ಲಿ ಒಮಿಕ್ರಾನ್​ ದಾಳಿ ಬಳಿಕ ಎಷ್ಟು ಜನರಿಗೆ ಸೋಂಕು ವ್ಯಾಪಿಸಿದೆ ಎಂಬುದನ್ನು ತಿಳಿಯಲು ಸರ್ಕಾರ ಸೆರೋ ಸಮೀಕ್ಷೆ ನಡೆಸಲು ಮುಂದಾಗಿದೆ.

sero-survey
ಸೆರೋ ಸಮೀಕ್ಷೆ

By

Published : Mar 5, 2022, 10:15 PM IST

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯು ಅಪ್ಪಳಿಸಿ ಇದೀಗ ಅದರ ತೀವ್ರತೆ ಗಣನೀಯವಾಗಿ ಕುಸಿದಿದೆ. ಇದರಿಂದ ರಾಜ್ಯದಲ್ಲಿ ಒಮಿಕ್ರಾನ್​ ದಾಳಿ ಬಳಿಕ ಎಷ್ಟು ಜನರಿಗೆ ಸೋಂಕು ವ್ಯಾಪಿಸಿದೆ ಎಂಬುದನ್ನು ತಿಳಿಯಲು ಸರ್ಕಾರ ಸೆರೋ ಸಮೀಕ್ಷೆ ನಡೆಸಲು ಮುಂದಾಗಿದೆ.

ಹೊಸ ರೂಪಾಂತರಿ ಒಮಿಕ್ರಾನ್ ಸೋಂಕು ಉಲ್ಬಣಗೊಂಡು ಜನವರಿ ಮೊದಲ ವಾರದಲ್ಲಿ ಪಾಸಿಟಿವ್ ರೇಟ್​ ಶೇ.5ರಷ್ಟು ದಾಟಿತ್ತು.‌ ಅಲ್ಲಿಂದ ಹೆಚ್ಚುತ್ತಾ ಗರಿಷ್ಠ ಶೇ.32.95 ರಷ್ಟು ತಲುಪಿತ್ತು. ಇದಾದ ಬಳಿಕ ದಿನೇ ದಿನೆ ಇಳಿಕೆ ದಾರಿ ಹಿಡಿದ ಸೋಂಕು ಫೆಬ್ರವರಿ ಮೊದಲ ವಾರದಲ್ಲಿ ಶೇ.5ರೊಳಗೆ ಬಂದಿತ್ತು. ಇದೀಗ ಫೆಬ್ರವರಿ ಅಂತ್ಯದಿಂದ ರಾಜ್ಯದಲ್ಲಿ ಒಟ್ಟಾರೆ ಪಾಸಿಟಿವಿಟಿ ದರ ಶೇ.0.52 ಮಾತ್ರವಿದೆ. ಕೊಡಗು, ಮೈಸೂರು, ಬೆಂಗಳೂರು ನಗರ, ತುಮಕೂರು, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಪಾಸಿಟಿವ್ ರೇಟ್​ ಶೇ.0.60 ಇದ್ದು, ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಶೇ.50 ರೊಳಗೆ ಇದೆ.‌

ಮೊದಲ ಹಾಗೂ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಸಾವು- ನೋವಿನ ಪ್ರಮಾಣವೂ ಕಡಿಮೆ‌ ಇದೆ. ಈ ಹಿಂದಿನ ಅಲೆಯಲ್ಲಿ ಪಾಸಿಟಿವ್ ದರ ಕಡಿಮೆ ಆಗಲು ತಿಂಗಳಾನುಗಟ್ಟಲೆ ಲಾಕ್​ಡೌನ್​ನಂತಹ ಕಠಿಣ ಕ್ರಮಗಳಿಗೆ ಮುಂದಾಗಬೇಕಿತ್ತು. ಆದರೆ, ಈ ಬಾರಿ ಲಘು ನಿಯಂತ್ರಣ ಕ್ರಮಗಳನ್ನಷ್ಟೇ ಸರ್ಕಾರ ಕೈಗೊಂಡಿತ್ತು. ಈ ಮಧ್ಯೆ ಒಮಿಕ್ರಾನ್​ ಎಂಟ್ರಿ ಕೊಟ್ಟು ಆರಂಭದಲ್ಲಿ ಆತಂಕ ಮೂಡಿಸಿತಾದರೂ ತದನಂತರ ಅದರ ತೀವ್ರತೆಯೂ ಇಳಿದಿದೆ.

ಸೆರೋದಿಂದ ಸೋಂಕಿನ ಪ್ರಮಾಣ ಪತ್ತೆ:ಸದ್ಯ ಸೋಂಕಿತರ ಸಂಖ್ಯೆ ಇಳಿಕೆ ಬೆನ್ನಲ್ಲೇ, ಇದೀಗ ಆರೋಗ್ಯ ಇಲಾಖೆಯು ಸೆರೋ ಸಮೀಕ್ಷೆ ನಡೆಸುವ ಕುರಿತು ಚಿಂತನೆ ನಡೆಸಿದೆ.‌ ಇದರ ಭಾಗವಾಗಿ ಅವಶ್ಯವಾದ ವಿವಿಧ ಕಾರ್ಯ ತಂತ್ರಗಳ ಕುರಿತು ತಜ್ಞರೊಂದಿಗೆ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಚರ್ಚೆ ನಡೆಸಿದ್ದಾರೆ. ಸೆರೋ ಸರ್ವೇಯಲ್ಲಿ ಸೋಂಕಿನ ಪ್ರಮಾಣ ಎಷ್ಟರ ಮಟ್ಟಿಗೆ ಹರಡಿದೆ? ಎಷ್ಟು ಜನಕ್ಕೆ ಸೋಂಕು ಬಂದು ಹೋಗಿದೆ? ಎಷ್ಟು ಜನರಲ್ಲಿ ಆಂಟಿಬಾಡಿ ಪತ್ತೆಯಾಗಿದೆ ಎಂಬುದನ್ನ ತಿಳಿಯಲು ಸೆರೋ ಸರ್ವೇ ಸಹಕಾರಿಯಾಗಲಿದೆ.

ಈಗಾಗಲೇ ಉತ್ತಮ ಮಟ್ಟದಲ್ಲಿ ವ್ಯಾಕ್ಸಿನೇಷನ್ ಕೂಡ ಆಗಿರುವುದರಿಂದ ಪ್ರತಿರೋಧಕ ಶಕ್ತಿ ಎಷ್ಟಿದೆ ಎಂಬುದನ್ನ ತಿಳಿಯಲು ಇಲಾಖೆ ಮುಂದಾಗಿದೆ. ಇನ್ನು ಕಳೆದ 7 ದಿನಗಳಿಂದ 412 ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದು, ಆಸ್ಪತ್ರೆಯಲ್ಲಿ 524, ಕೋವಿಡ್ ಕೇರ್ ಸೆಂಟರ್​ನಲ್ಲಿ ಮೂವರು ಸೋಂಕಿತರು ಮಾತ್ರ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಓದಿ:ತಕ್ಷಣವೇ ಪೆಟ್ರೋಲ್​ ಟ್ಯಾಂಕ್​​ ಫುಲ್ ಮಾಡಿಕೊಳ್ಳಿ.. ಮೋದಿ ಸರ್ಕಾರದ ಎಲೆಕ್ಷನ್​​ ಆಫರ್​ ಮುಗಿಯಲಿದೆ: ರಾಹುಲ್​

ABOUT THE AUTHOR

...view details