ಕರ್ನಾಟಕ

karnataka

ETV Bharat / city

ಬಿಜೆಪಿ ಸಿಎಎ ಎಂದು ಬಾಯಿ ಬಡಕೊಳ್ತು, ಆಪ್‌ಗೆ ಅಭಿವೃದ್ಧಿ ಗೆಲುವು ತಂದಿತು: ಹೆಚ್‌ಡಿಡಿ ವಾಖ್ಯಾನ

ಸಿಎಎ ಎಂದು ಹೊಡೆದುಕೊಳ್ಳುತ್ತಿದ್ದವರ ಮುಂದೆ ಜನರ ಅವಶ್ಯಕಗಳನ್ನು ಪೂರೈಸಿದ ಆಪ್ ಪಕ್ಷ ಅಭಿವೃದ್ಧಿ ಹೆಸರಲ್ಲಿ ಚುನಾವಣೆಗೆ ಹೋಗಿ ಗೆದ್ದಿತು ಎಂದು ಮಾಜಿ ಪ್ರಧಾನಿ ದೇವೇಗೌಡರು ದೆಹಲಿ ಫಲಿತಾಂಶವನ್ನ ವಿಶ್ಲೇಷಿಸಿದ್ದಾರೆ.

By

Published : Feb 11, 2020, 4:32 PM IST

hd-devegowda-reaction-on-delhi-assembly-election
ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು:ಸಿಎಎ ಎಂದು ಹೊಡೆದುಕೊಳ್ಳುತ್ತಿದ್ದವರ ಮುಂದೆ ಜನರ ಅವಶ್ಯಕಗಳನ್ನು ಪೂರೈಸಿದ ಆಪ್ ಪಕ್ಷ ಅಭಿವೃದ್ಧಿ ಹೆಸರಲ್ಲಿ ಚುನಾವಣೆಗೆ ಹೋಗಿ ಗೆದ್ದಿತು ಎಂದು ಮಾಜಿ ಪ್ರಧಾನಿ ದೇವೇಗೌಡರು ದೆಹಲಿ ಫಲಿತಾಂಶವನ್ನ ವಿಶ್ಲೇಷಿಸಿದ್ದಾರೆ.

ದಿಲ್ಲಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಜ್ರಿವಾಲ್‌ ನಿರಂತರ ಹೋರಾಟದಿಂದ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಬಿಜೆಪಿ ಸಿಎಎ ಎಂದು ಹೊಡೆದಾಡಿದ್ರೆ, ಆಪ್‌ ಕುಡಿಯುವ ನೀರು, ಸಾರಿಗೆ, ಶಿಕ್ಷಣ ವ್ಯವಸ್ಥೆಯಂತಹ ಅಭಿವೃದ್ಧಿಯನ್ನ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿ ಗೆದ್ದಿದೆ.

ದೆಹಲಿ ಫಲಿತಾಂಶದ ಕುರಿತು ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯೆ

ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು, ಪಕ್ಷದ ನಾಯಕರು, ಶಾಸಕರು, ಸಂಸದರನ್ನು ಒಗ್ಗೂಡಿಸಿ ಕೆಲಸ‌ ಮಾಡುತ್ತೇನೆ. ನನ್ನ ಪಕ್ಷದ ಹಳೆಯ ನಾಯಕರು ಬೇರೆ ಬೇರೆ ಪಕ್ಷದಲ್ಲಿ ಇದ್ದಾರೆ. ಅವರನ್ನು ಒಗ್ಗೂಡಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ABOUT THE AUTHOR

...view details