ಕರ್ನಾಟಕ

karnataka

ನಿರ್ಬಂಧ ಸಡಿಲ: ಶೇ.50ರಷ್ಟೂ ಚೇತರಿಕೆ ಕಾಣದ ರಾಜ್ಯ

ರಾಜ್ಯದಲ್ಲಿ ಅನ್​ಲಾಕ್​ 4.0 ಹಂತ ಮುಗಿದಿದ್ದು, ಅಕ್ಟೋಬರ್​​ 15 ರಿಂದ ಅನ್​ಲಾಕ್ 5.0 ಜಾರಿಯಾಗಲಿದೆ. ಆದರೆ, ಕೊರೊನಾ ಪ್ರಕರಣಗಳು ಒಂದೇ ಸಮನೇ ಏರಿಕೆಯಾಗುತ್ತಿವೆ. ಸಾರ್ವಜನಿಕರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದಿರುವುದೇ ಅದಕ್ಕೆ ಕಾರಣ ಎನ್ನಲಾಗಿದೆ.

By

Published : Oct 9, 2020, 7:56 PM IST

Published : Oct 9, 2020, 7:56 PM IST

Has Normalcy returned to the city?
ಸಹಜ ಸ್ಥಿತಿಗೆ ಮರ​ಳು​ತ್ತಿ​ರುವ ನಗರ

ಬೆಂಗಳೂರು: ಮಾರ್ಚ್​ನಲ್ಲಿ ಆರಂಭವಾದ ಕೊರೊನಾ ಆತಂಕ ಇನ್ನೂ ಕಡಿಮೆಯಾಗಿಲ್ಲ. ಜನ ಜಂಗುಳಿಯಿಂದ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತವಾಗಿದ್ದ ರಾಜ್ಯ ಕೊರೊನಾ ಭಯಕ್ಕೆ ಏಕಾಏಕಿ ಸ್ತಬ್ಧವಾಗಿತ್ತು. ಇದೀಗ ಕೊರೊನಾ ಆತಂಕ ಮುಂದು​ವ​ರೆ​ದಿ​ರುವ ನಡು​ವೆ​ಯೇ ರಾಜ್ಯಾ​ದ್ಯಂತ ಜನ​ಜೀ​ವನ ನಿಧಾ​ನ​ವಾಗಿ ಸಹಜ ಸ್ಥಿತಿಗೆ ಮರ​ಳು​ತ್ತಿ​ದೆ.

ಶಾಲಾ - ಕಾಲೇ​ಜು​ಗಳು, ಪಾರ್ಕ್‌ಗಳು, ಸಿನಿಮಾ ಮಂದಿ​ರ​, ಮನರಂಜನಾ ಕೇಂದ್ರ, ಸಂಪೂರ್ಣ ರೈಲು ಹಾಗೂ ವಿಮಾನ ಸಂಚಾರ ಹೊರ​ತು​ಪ​ಡಿಸಿ ರಾಜ್ಯಾ​ದ್ಯಂತ ಜನ ​ಜೀ​ವನ ಶೇ.90ರಷ್ಟು ಅನ್‌​ಲಾಕ್‌ ಆಗಿದೆ. ಆದರೆ, ಅಕ್ಟೋಬರ್​ 15ರಿಂದ ಉಳಿದವುಗಳ ಲಾಕ್​ ಕೂಡ ಓಪನ್ ​ಆಗಲಿದೆ. ಕೋವಿ​ಡ್‌ಗೂ ಮುನ್ನ ವ್ಯಾಪಾರ ವಹಿ​ವಾಟಿಗೆ ಹೋಲಿ​ಸಿದರೆ ಶೇ.50ರಷ್ಟೂ ಕೂಡ ಚೇತ​ರಿಕೆ ಕಂಡಿಲ್ಲ. ಸಾರಿಗೆ ಸೇವೆ ಆರಂಭವಾಗಿದ್ದರೂ ಜನರು ಬಳಸಲು ಹಿಂದೇಟು ಹಾಕುತ್ತಿದ್ದಾರೆ.

ದೇಶಾ​ದ್ಯಂತ ಕೋವಿಡ್‌ ಆತಂಕ ಕಾಣಿ​ಸಿ​ಕೊಂಡಾಗ ಮಾರ್ಚ್​​​ 25ರಿಂದ ಲಾಕ್‌​ಡೌನ್‌ ಜಾರಿಗೊಳಿ​ಸ​ಲಾ​ಗಿತ್ತು. ಆ ನಂತರ ಹಂತ ಹಂತ​ವಾಗಿ ಲಾಕ್‌​ಡೌನ್‌ ಅನ್ನು ತೆರ​ವು​ಗೊ​ಳಿ​ಸ​ಲಾ​ಗಿದ್ದು, ಸೆಪ್ಟೆಂಬರ್‌ನಿಂದ ಸಾರ್ವಜನಿಕ ಕಾರ್ಯಕ್ರಮಗಳು, ಮೆಟ್ರೋ ರೈಲು, ಬಾರ್‌ ಮತ್ತು ರೆಸ್ಟೋರೆಂಟ್‌, ಕ್ಲಬ್‌ ಸೇರಿ ಅನೇಕ ನಿರ್ಬಂಧಿತ ಕ್ಷೇತ್ರಗಳಿಗೂ ಷರತ್ತು ವಿಧಿಸಿ ಅನುವು ಮಾಡಿಕೊಡಲಾಗಿದೆ. ಇನ್ನು ಪ್ರವಾಸೋದ್ಯಮ ನಂಬಿ ಜೀವನ ನಡೆಸುತ್ತಿದ್ದ ಹೋಟೆಲ್​ಗಳು, ಕಾರು ಮಾಲೀಕರು ಮತ್ತು ಚಾಲಕರು ಆಟೋ ವಾಲಾಗಳು, ಗೈಡರ್​ಗಳ ಕುಟುಂಬ, ಕರಕುಶಲ ಕರ್ಮಿಗಳು ಹೀಗೆ ಹತ್ತಾರು ವಿವಿಧ ಕ್ಷೇತ್ರಗಳ ಮೂಲಕ ಜೀವನ ಸಾಗಿಸುತ್ತಿದ್ದವರ ಬದುಕು ಅಯೋಮಯವಾಗಿದೆ.

ಸಹಜ ಸ್ಥಿತಿಗೆ ಮರಳುತ್ತಿರುವ ರಾಜ್ಯ

ಇನ್ನೂ ಕಾರ್ಮಿಕರು ಹೊರರಾಜ್ಯದಿಂದ ವಿರಳ ಸಂಖ್ಯೆಯಲ್ಲಿ ಕೆಲಸ ಅರಸಿ ತುಮಕೂರು ಜಿಲ್ಲೆಗೆ ಹೆಜ್ಜೆ ಹಾಕುತ್ತಿದ್ದಾರೆ. ಜಿಲ್ಲೆಯ ಕೆಎಸ್ಆರ್​​​​ಟಿಸಿ ವಿಭಾಗೀಯ ನಿಯಂತ್ರಣದಲ್ಲಿ ನಿತ್ಯ 500 ಬಸ್​​​ಗಳು ಓಡಾಡ್ತಿದ್ದರೂ ಪ್ರಯಾಣಿಕರ ಓಡಾಟ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಅಲ್ಲದೇ, ಗ್ರಾಮೀಣ ಪ್ರದೇಶಗಳಿಗೆ ಬಸ್​ಗಳ ಸಂಚಾರ ಇನ್ನು ಆರಂಭವಾಗದ ಹಿನ್ನೆಲೆ ಜನ ಸಂಚಾರ ಇಲ್ಲದಂತಾಗಿದೆ.

ಮಂಗಳೂರಿನಲ್ಲಿ ಕಾರ್ಮಿಕರಿಲ್ಲದೇ ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆಯುಂಟಾಗಿತ್ತು. ಈ ಕಾರಣದಿಂದ ಕೆಲವು ಬಿಲ್ಡರ್ಸ್​​​ಗಳೇ ಬಸ್ ವ್ಯವಸ್ಥೆ ಮಾಡಿ ಕಾರ್ಮಿಕರನ್ನು ಕರೆಸಿಕೊಂಡಿದ್ದರು. ಕೊರೊನಾ ಭಯದಿಂದ ಸ್ಥಬ್ಧವಾಗಿದ್ದ ನಗರಗಳಲ್ಲಿ ಚಟುವಟಿಕೆಗಳು ಆರಂಭವಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಸಹಜಸ್ಥಿತಿಗೆ ಬಂದಿಲ್ಲ. ಆದರೆ, ಸಹಜ ಸ್ಥಿತಿಗೆ ಮರಳಲು ಸಾಕಷ್ಟು ಸಮಯ ಬೇಕಾಗಬಹುದು ಎನ್ನಲಾಗಿದೆ.

ABOUT THE AUTHOR

...view details