ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ: ಅರುಣ್ ಸಿಂಗ್ ಮುಂದೆ ಹೆಚ್.ವಿಶ್ವನಾಥ್ ಹೇಳಿದ್ದೇನು?

ರಾಜ್ಯದಲ್ಲಿ ಸರ್ಕಾರದ ಪರಿಸ್ಥಿತಿ ಯಾವುದೂ ಸರಿಯಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಗತ್ಯ ಇದೆ. ಬಿಎಸ್​ವೈ ಮಾರ್ಗದರ್ಶಕರಾಗಿದ್ದು, ಪಂಚಮಸಾಲಿ ಸಮುದಾಯಕ್ಕೆ ಸಿಎಂ ಪಟ್ಟ ನಿಡಬೇಕೆಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

By

Published : Jun 17, 2021, 12:40 PM IST

Updated : Jun 17, 2021, 12:52 PM IST

H Vishwanath
ಹೆಚ್.ವಿಶ್ವನಾಥ್

ಬೆಂಗಳೂರು:ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎದುರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಗತ್ಯ ಇದೆ ಎಂದು ಅಭಿಪ್ರಾಯ ಹೇಳಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

ಅರುಣ್ ಸಿಂಗ್ ಮಾತುಕತೆ ಬಗ್ಗೆ ಮಾತನಾಡಿದ ವಿಶ್ವನಾಥ್

ಬಿಎಸ್​ವೈ ಮಾರ್ಗದರ್ಶಕರಾಗಿರಲಿ, ಪಂಚಮಸಾಲಿ ಸಮುದಾಯದವರನ್ನು ಸಿಎಂ ಮಾಡಿ ಎಂದು ಅರುಣ್ ಸಿಂಗ್ ಮುಂದೆ ಹೆಚ್.ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಆರೋಗ್ಯ ಸಮಸ್ಯೆ ಇದೆ. ಮೊದಲಿನ ಶಕ್ತಿ ಇಲ್ಲ.‌ ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ, ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸಾರ್ವಜನಿಕ ಅಭಿಪ್ರಾಯ ಸರ್ಕಾರದ ವಿರುದ್ಧವಾಗುತ್ತಿದೆ.‌ ಈ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆ ಆಗಲಿ ಎಂಬ ಸಲಹೆಯನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ವಿವರಿಸಿದ್ದೇನೆ ಎಂದು ಹೆಚ್.ವಿಶ್ವನಾಥ್ ಹೇಳಿದರು.

ಮಠಾಧಿಪತಿಗಳು ಬಸವಣ್ಣ ತತ್ವ ಮೀರಿ ಹೋಗಬಾರದು. ಬಿಜೆಪಿಗೆ ಎಲ್ಲ ಜಾತಿ, ಧರ್ಮದವರು ಮತದಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಆದರೆ ಪಂಚಮಸಾಲಿಗೆ ಮುಖ್ಯಮಂತ್ರಿ ಪಟ್ಟ ನೀಡಿ ಎಂದರು.

ಮುರುಗೇಶ್ ನಿರಾಣಿ, ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ ಇದ್ದಾರೆ. ಈ ಪೈಕಿ ಯಾರಿಗಾದರು ಕೊಡಿ ಎಂದಿದ್ದೇನೆ. ಇದಕ್ಕೆ ಅರುಣ್ ಸಿಂಗ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತ, ಯಾರ ಪರ ಇಲ್ಲ, ವಿರುದ್ಧವಾಗಿಯೂ ಇಲ್ಲ. ನಾನು ಹೇಳಿದ ಮಾತನ್ನು ಅರುಣ್ ಸಿಂಗ್ ಗಂಭೀರವಾಗಿ ಆಲಿಸಿದ್ದಾರೆ. ಎಲ್ಲವನ್ನು ಬರೆದುಕೊಂಡಿದ್ದಾರೆ. ಸರ್ಕಾರ ಯಾವ ರೀತಿ ನಡೆಯುತ್ತಿದೆ, ಎಲ್ಲವೂ ವಿವರಣೆ ನೀಡಿದ್ದೇನೆ ಎಂದು ತಿಳಿಸಿದರು.

ನಾನು ಅಧಿಕಾರದ ಅಪೇಕ್ಷೆಗಾಗಿ ಮಾತನಾಡಿಲ್ಲ, ಹಲವಾರು ಹುದ್ದೆ ನಿರ್ವಹಣೆ ಮಾಡಿದ್ದೇನೆ, ಅರುಣ್ ಸಿಂಗ್ ಮುಂದೆ ವಸ್ತುಸ್ಥಿತಿ ವಿವರಿಸಿದ್ದೇನೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿದ್ದು, ತನ್ನ ಅಭಿಪ್ರಾಯದ ಬಗ್ಗೆ ಅವರ ಪ್ರತಿಕ್ರಿಯೆ ಪಾಸಿಟಿವ್ ಆಗಿತ್ತು ಎಂದರು.

ಇದನ್ನೂ ಓದಿ:ಸಿಎಂ ಸೂಚನೆ ಮೇರೆಗೆ ಅರುಣ್ ಸಿಂಗ್ ಭೇಟಿ ರದ್ದುಗೊಳಿಸಿದ ಬಿಎಸ್​ವೈ ಪರ ಶಾಸಕರ ಬಣ

Last Updated : Jun 17, 2021, 12:52 PM IST

ABOUT THE AUTHOR

...view details