ಬೆಂಗಳೂರು: ನಗರದ ಐಡಿಸಿ ಕಿಚನ್, ಸಿದ್ಧಾರ್ಥ್ ಅವರ ನೆನಪಿನಾರ್ಥ ನಗರದ ಕೋರಮಂಗಲ ಹಾಗೂ ಗಾಂಧಿನಗರದಲ್ಲಿರುವ ಐಡಿಸಿ ಕಿಚನ್ ಪ್ಲೇಟ್ಗಳಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ಕಾಫಿ ವಿತರಿಸಲಾಯ್ತು.
ಸಿದ್ಧಾರ್ಥ್ ಸ್ಮರಣಾರ್ಥ ಬೆಂಗಳೂರಲ್ಲಿ ಸಾರ್ವಜನಿಕರಿಗೆ ಉಚಿತ ಕಾಫಿ! - Free coffee
ಉದ್ಯಮಿ ಸಿದ್ಧಾರ್ಥ್ ಅನಿರೀಕ್ಷಿತ ಸಾವು ಉದ್ಯಮಿಗಳ ವಲಯದಲ್ಲಿ ನೋವುಂಟು ಮಾಡಿದೆ. ಇದೀಗ ಪ್ರತಿಯೊಬ್ಬರೂ ಕಾಫಿ ಕುಡಿಯುವಾಗ ಸಿದ್ಧಾರ್ಥ್ ಅವರನ್ನು ನೆನೆಯದೇ ಇರಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಐಡಿಸಿಯಲ್ಲಿ ಗುರುವಾರ ಉಚಿತವಾಗಿ ಸಾರ್ವಜನಿಕರಿಗೆ ಕಾಫಿ ವಿತರಿಸಲಾಯಿತು.
![ಸಿದ್ಧಾರ್ಥ್ ಸ್ಮರಣಾರ್ಥ ಬೆಂಗಳೂರಲ್ಲಿ ಸಾರ್ವಜನಿಕರಿಗೆ ಉಚಿತ ಕಾಫಿ!](https://etvbharatimages.akamaized.net/etvbharat/prod-images/768-512-4014559-thumbnail-3x2-jayjpg.jpg)
ಸಾರ್ವಜನಿಕರಿಗೆ ಉಚಿತ ಕಾಫಿ
ಗುರುವಾರ ಸಂಜೆ 4 ಗಂಟೆಯಿಂದ 6 ರವರೆಗೆ ಈ ಉಚಿತ ಕಾಫಿ ವಿತರಣೆ ನಡೆಯಿತು. ಕಾಫಿ ಕುಡಿದ ಪ್ರತಿಯೊಬ್ಬರು ಸಿದ್ಧಾರ್ಥ್ ಅವರನ್ನು ಸ್ಮರಿಸಿದರು. ಈ ಮೂಲಕ ಕಾಫಿ ಅಂದರೆ ಸಿದ್ಧಾರ್ಥ್, ಸಿದ್ಧಾರ್ಥ್ ಅಂದ್ರೆ ಕಾಫಿ ಎನ್ನುವ ಮಾತು ಅಚ್ಚಳಿಯದೆ ಉಳಿದಂತಾಗಿದೆ.
ಸಾರ್ವಜನಿಕರಿಗೆ ಉಚಿತ ಕಾಫಿ
ಕಾಫಿಯ ಪ್ರತಿಯೊಂದು ಸಿಪ್ನಲ್ಲೂ ನಿಮ್ಮ ನೆನಪು ಸದಾ ಇರುತ್ತದೆ ಎಂದು ಐಡಿಸಿ ಸಂಸ್ಥೆ ತಿಳಿಸಿದೆ.
Last Updated : Aug 2, 2019, 2:32 AM IST