ಕರ್ನಾಟಕ

karnataka

By

Published : Jan 11, 2020, 3:26 PM IST

ETV Bharat / city

ಮೋದಿಗೆ ತಾಕತ್ತಿದ್ದರೆ ಮರುಚುನಾವಣೆ ಘೋಷಿಸಲಿ: ಉಗ್ರಪ್ಪ ಬಹಿರಂಗ ಸವಾಲ್

ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಮರುಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

KN_BNG_03_V_S_UGRAPPA_PC_KPCC_SCRIPT_9020923
ಮೋದಿಗೆ ತಾಕತ್ತಿದ್ದರೆ ಮರುಚುನಾವಣೆಗೆ ಬರಲಿ: ಮಾಜಿ ಸಂಸದ ಉಗ್ರಪ್ಪ ಬಹಿರಂಗ ಸವಾಲ್

ಬೆಂಗಳೂರು:ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಮರುಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಪ್ರಧಾನಿ ಮೋದಿಗೆ ಉಗ್ರಪ್ಪ ಓಪನ್ ಚಾಲೆಂಜ್ ಮಾಡುತ್ತಿದ್ದೇನೆ, ಅಸೆಂಬ್ಲಿ, ಸಂಸತ್ ವಿಸರ್ಜಿಸಿ ಚುನಾವಣೆಗೆ ಬನ್ನಿ. ಬ್ಯಾಲೆಟ್ ಪೇಪರ್ ಮೇಲೆ ಚುನಾವಣೆ ಎದುರಿಸಿ, ಚುನಾವಣೆಯಲ್ಲಿ ನೀವು ಗೆದ್ದು ಬನ್ನಿ. ಆಗ ನಾನು ಇರುವವರೆಗೆ ನಿಮ್ಮ ಬಗ್ಗೆ ಒಂದೂ ಮಾತನಾಡಲ್ಲ ಎಂದರು. ಕನ್ನಡದ ಸಾಹಿತಿ ಡಾ. ಎಸ್.ಎಲ್.ಭೈರಪ್ಪನವರ ಬರವಣಿಗೆ ಅದ್ಬುತ. ಅವರ ವಿಚಾರಗಳು ಏನೇ ಇರಲಿ, ಆದರೆ ಅವರು ಯಾವಾಗ ಬಿಜೆಪಿ ಸೇರಿದ್ರು ಗೊತ್ತಿಲ್ಲ. ಬೈರಪ್ಪನವರು ಬಿಜೆಪಿಯ ವಿಚಾರಧಾರೆಯನ್ನ ಮಂಡಿಸುತ್ತಿದ್ದು, ರಾಜ್ಯಸಭೆಗೆ ಹೋಗುವ ಆಸೆಯೇನಾದ್ರೂ ಅವರಿಗೆ ಇರಬಹುದು. ಬಿಜೆಪಿ ನಾಯಕರು ಅವರಿಗೆ ಕೊಡೋಕೆ ಹೊರಟಿರಬಹುದು. ಭೈರಪ್ಪ ಅದಕ್ಕೇ ಬಿಜೆಪಿಯನ್ನ ಹೊಗಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಇದನ್ನ ನೀವು ಅರಿತುಕೊಂಡರೆ ಸಾಕು ಭೈರಪ್ಪನವರೇ, ಇಳಿವಯಸ್ಸಿನಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಯಾಕೆ ಮಸಿ ಬಳಿದುಕೊಳ್ತೀರಾ. ಲೇಖಕರು ಅಂತ ಯಾಕೆ ಹಣೆಪಟ್ಟಿ ಹಾಕಿಕೊಳ್ತೀರಾ ಎಂದು ಆಕ್ರೋಶ ಹೊರ ಹಾಕಿದರು.

ಮೋದಿಗೆ ತಾಕತ್ತಿದ್ದರೆ ಮರುಚುನಾವಣೆಗೆ ಬರಲಿ: ಮಾಜಿ ಸಂಸದ ಉಗ್ರಪ್ಪ ಬಹಿರಂಗ ಸವಾಲ್
ಚಿಕ್ಕಮಗಳೂರು ಜಿಲ್ಲೆ ಕನ್ನಡ ಸಾಹಿತ್ಯ ಸಮಾವೇಶವನ್ನ ವಿಠ್ಹಲ್​ ಹೆಗಡೆ ಭಾಗಿಯಾಗ್ತಾರೆ ಅಂತ ರದ್ದು ಮಾಡೋಕೆ ಹೊರಟರೆ ಹೇಗೆ? ಎರಡು ದಿನದ ಕಾರ್ಯಕ್ರಮ ಒಂದೇ ದಿನಕ್ಕೆ ಇಳಿಸಿದೆ. ರಾಜ್ಯ ಸರ್ಕಾರ ಇಷ್ಟು ಕೀಳುಮಟ್ಟಕ್ಕಿಳಿದಿದೆ. ಕನ್ನಡ, ಕನ್ನಡಿಗರಿಗೆ ಸರ್ಕಾರ ಮಾಡಿದ ದ್ರೋಹ. ಸಮ್ಮೇಳನಕ್ಕೆ ರಕ್ಷಣೆ ಕೊಡಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು. ಸೋಮಶೇಖರ ರೆಡ್ಡಿ ಸಮಾಜ ಒಡೆಯೋ ಹೇಳಿಕೆ ಕೊಡ್ತಾರೆ ಅವರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ಅಂತವರ ಜೊತೆ ನಿಂತು ಫೋಟೋಗೆ ಫೋಸ್ ಕೊಡ್ತೀರಿ. ಅವರ ಕೇಸ್ ವಾಪಸ್ ತೆಗೆದುಕೊಳ್ಳೋಕೆ ಹೇಳ್ತೀರ. ಇದು ನಿಮಗೆ ನಾಚಿಕೆಯಾಗಲ್ವಾ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ವಿರುದ್ದ ಹರಿಹಾಯ್ದರು.

For All Latest Updates

TAGGED:

ABOUT THE AUTHOR

...view details