ಕರ್ನಾಟಕ

karnataka

By

Published : Jun 5, 2021, 9:48 PM IST

ETV Bharat / city

ಪಿಎಂ ಪಟ್ಟದಿಂದ ದೇವೇಗೌಡರು ಕೆಳಗಿಳಿಯಲು ಕಾರಣ ತಿಳಿಸಿದರು ಮಾಜಿ ಸಿಎಂ ಎಸ್​​ಎಂಕೆ

ವಾಜಪೇಯಿ ಸರ್ಕಾರ ಪತನಗೊಂಡ ಬಳಿಕ ತೃತೀಯ ರಂಗಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಕಾಂಗ್ರೆಸ್‍ನ ಆಗಿನ ಅಧ್ಯಕ್ಷರಾಗಿದ್ದ ಪಿ.ವಿ.ನರಸಿಂಹ ರಾವ್ ಅವರು ಹೇಳಿದ್ದರು. ನನ್ನ ಮತ್ತು ಅಂದು ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಸಚ್ಚಿದಾನಂದ ಸಮ್ಮುಖದಲ್ಲಿ ದೇವೇಗೌಡ ಅವರಿಗೆ ಪ್ರಧಾನಿಯಾಗಬೇಕು ಮತ್ತು ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದರು. ಈ ಬೆಳವಣಿಗೆಗೆ ನಾನು ಸಾಕ್ಷಿಯಾಗಿದ್ದೆ..

former cm SM krishna talk
ಎಸ್.ಎಂ.ಕೃಷ್ಣ

ಬೆಂಗಳೂರು : ಕಾಂಗ್ರೆಸ್ ನೀಡಿದ ಬೆಂಬಲವನ್ನು ವಾಪಸ್ ಪಡೆದ ಕಾರಣ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ನೇತೃತ್ವದ ಕೇಂದ್ರ ಸರ್ಕಾರ ವಿಶ್ವಾಸಮತ ಗಳಿಸುವಲ್ಲಿ ವಿಫಲವಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹಳೆ ಘಟನೆ ಮೆಲುಕು ಹಾಕಿದರು.

ಮಾಜಿ ಪ್ರಧಾನಿ ದೇವೇಗೌಡರ ಕುರಿತಂತೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಮಾತು

ಓದಿ: Good News: ರಾಜ್ಯದಲ್ಲಿ ಕೊರೊನಾ ಇಳಿಮುಖ -13,800 ಹೊಸ ಕೇಸ್​, 365 ಮಂದಿ ಬಲಿ

ದೇವೇಗೌಡ ಅವರು ಪ್ರಧಾನಿಯಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆ ಇಂದು ಜೆಡಿಎಸ್ ಆಯೋಜಿಸಿದ 'ಯುವಜನತೆಗೆ ಗೊತ್ತಿಲ್ಲದ ದೇವೇಗೌಡರ ಪರಿಚಯ' ಕುರಿತು ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನಲ್ಲಿ ದೇವೇಗೌಡ ಅವರು ಪ್ರಧಾನಿಯಾಗಿದ್ದರು. ಆದರೆ, ರಾಜ್ಯದ ಕಾಂಗ್ರೆಸ್ ನಾಯಕರು ಬೆಂಬಲ ವಾಪಸ್ ಪಡೆಯುವಂತೆ ಹೈಕಮಾಂಡ್‍ಗೆ ಪದೇಪದೆ ಸಂದೇಶ ರವಾನಿಸುತ್ತಿದ್ದರು.

ಹೀಗಾಗಿ, ಅನಿವಾರ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ಸಹ ದೇವೇಗೌಡ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದುಕೊಂಡಿತು. ಪರಿಣಾಮ ದೇವೇಗೌಡ ಅವರು ವಿಶ್ವಾಸ ಮತಯಾಚನೆಯಲ್ಲಿ ವಿಫಲವಾದರು ಎಂದು ಅಂದಿನ ಘಟನಾವಳಿಗಳನ್ನು ತಿಳಿಸಿದರು.

ದಿವಂಗತ ವಾಜಪೇಯಿ ಸರ್ಕಾರ ಪತನಗೊಂಡ ಬಳಿಕ ತೃತೀಯ ರಂಗಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಕಾಂಗ್ರೆಸ್‍ನ ಆಗಿನ ಅಧ್ಯಕ್ಷರಾಗಿದ್ದ ಪಿ.ವಿ.ನರಸಿಂಹ ರಾವ್ ಅವರು ಹೇಳಿದ್ದರು. ನನ್ನ ಮತ್ತು ಅಂದು ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಸಚ್ಚಿದಾನಂದ ಸಮ್ಮುಖದಲ್ಲಿ ದೇವೇಗೌಡ ಅವರಿಗೆ ಪ್ರಧಾನಿಯಾಗಬೇಕು ಮತ್ತು ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದಿದ್ದರು. ಈ ಬೆಳವಣಿಗೆಗೆ ನಾನು ಸಾಕ್ಷಿಯಾಗಿದ್ದೆ ಎಂದರು.

ದೇವೇಗೌಡರು ಪ್ರಧಾನಿಯಾಗಿ ಶಿಸ್ತು, ಸಂಯಮ, ಗೌರವದಿಂದ ದೇಶವನ್ನು ಆಳಿದರು. ಯಾವ ಅಪಸ್ವರಗಳು ಇರಲಿಲ್ಲ. ಆದರೆ, ಕಾಂಗ್ರೆಸ್‍ನಲ್ಲಿ ಅಧ್ಯಕ್ಷರು ಬದಲಾದರು, ನರಸಿಂಹರಾವ್ ಬದಲಿಗೆ ಸೀತಾರಾಂ ಕೇಸರಿ ಅಧ್ಯಕ್ಷರಾದರು. ಸೀತಾರಾಂ ಕೇಸರಿ ಮತ್ತು ದೇವೇಗೌಡ ಅವರ ಸಂಬಂಧ ಚೆನ್ನಾಗಿತ್ತಾದರೂ ನಂತರದ ದಿನದಲ್ಲಿ ಅನುಮಾನಗಳು ಶುರುವಾಯಿತು.

ಇದಕ್ಕೆ ಪೂರಕವೆಂಬಂತೆ ರಾಜ್ಯದ ಕಾಂಗ್ರೆಸ್ ನಾಯಕರು ಹೈಕಮಾಂಡ್‍ಗೆ ಬೆಂಬಲ ವಾಪಸ್ ಪಡೆಯುವಂತೆ ಆಗಾಗ್ಗೆ ಸಂದೇಶಗಳನ್ನು ರವಾನಿಸುತ್ತಿದ್ದರು. ಈ ಒತ್ತಡಕ್ಕೆ ದೇವೇಗೌಡರು ಬಲಿಯಾಗಬೇಕಾಯಿತು ಎಂದು ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.

ಕಾಂಗ್ರೆಸ್ ಬೆಂಬಲ ವಾಪಸ್ ಪಡೆಯುವ ಸುಳಿವು ದೇವೇಗೌಡ ಅವರಿಗೆ ಗುಪ್ತಚರದಿಂದ ಮಾಹಿತಿ ಲಭ್ಯವಾಯಿತು. ನಾನು ಮತ್ತು ಹಿರಿಯ ನಾಯಕರಾಗಿದ್ದ ಆರ್.ಕೆ.ಧಾವನ್ ಅವರು ದೇವೇಗೌಡರ ಮನೆಗೆ ಹೋಗಿದ್ದ ವೇಳೆ ಈ ವಿಚಾರ ತಿಳಿಯಿತು. ಆರ್.ಕೆ.ಧಾವನ್ ಇದನ್ನು ತಡೆಯಲು ಮುಂದಾಗಿದ್ದರು. ಆದರೆ, ಅಷ್ಟೊತ್ತಿಗೆ ಸೀತಾರಾಂ ಕೇಸರಿ ಅವರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬೆಂಬಲ ವಾಪಸ್ ಪಡೆಯುವ ಬಗ್ಗೆ ಮಾಹಿತಿ ನೀಡಿದ್ದರು.

ಹೀಗಾಗಿ, ರಾಷ್ಟ್ರಪತಿಗಳು ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರು. ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಪರಿಣಾಮ ದೇವೇಗೌಡರ ಸರ್ಕಾರ ಪತನವಾಯಿತು ಎಂದು ಹೇಳಿದರು. ದೇವೇಗೌಡರು ಪ್ರಧಾನಿಯಾಗಿ 25 ವರ್ಷ ತುಂಬಿದ ಸಂದರ್ಭದಲ್ಲಿ ಅವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುವುದಾಗಿ ಎಸ್.ಎಂ.ಕೃಷ್ಣ ಹೇಳಿದರು.

ABOUT THE AUTHOR

...view details