ಕರ್ನಾಟಕ

karnataka

ETV Bharat / city

ಕೊರೊನಾ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ತಜ್ಞರ ಸಮಿತಿ ರಚನೆ

ಕೊರೊನಾ ಕುರಿತು ಪರಿಶೀಲನೆ ನಡೆಸಲು ರಚಿಸಿರುವ ತಜ್ಞರ ತಂಡ ಪ್ರತಿದಿನ ಎಲ್ಲ ರೋಗಿಗಳ ಮಾಹಿತಿಯನ್ನು ಅಧ್ಯಯನ‌ ಮಾಡಲಿದೆ. ರಾಜ್ಯದಲ್ಲಿ ವರದಿಯಾಗಿರುವ ಪ್ರಕರಣಗಳ ವಿಶ್ಲೇಷಣೆ ನಡೆಸಲಿದೆ.

By

Published : Apr 13, 2020, 9:04 PM IST

Establishment of Expert Panel for Coronavirus InfEstablishment of Expert Panel for Coronavirus Inf
ಕೊರೊನಾ ಸೋಂಕಿತರ ಏರಿಕೆ

ಬೆಂಗಳೂರು: ದಿನೇ ದಿನೆ ಕೊರೊನಾ ಸೋಂಕಿತರ ಏರಿಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಲು ತಜ್ಞರ ಸಮಿತಿ ರಚನೆ‌ ಮಾಡಲಾಗಿದೆ.

ಡಾ.ಎಂ.ಕೆ.ಸುದರ್ಶನ್, ಡಾ.ಗಿರಿಧರ್ ಬಾಬು, ಡಾ.ವಿ.ರವಿ, ಡಾ.ಅನಿತಾ, ಡಾ.ಪ್ರಕಾಶ್, ಡಾ.ಕೆ.ರವಿ, ಡಾ.ಶಶಿಭೂಷಣ್ ಅವರಿರುವ ತಜ್ಞರ ತಂಡವನ್ನು ರಾಜ್ಯ ಸರ್ಕಾರ ರಚಿಸಿದೆ.

ತಜ್ಞರ ಸಮಿತಿ ರಚನೆ

ಬೇರೆ ಬೇರೆ ರೋಗಿಗಳಿಗೆ ಸೋಂಕು ತಗುಲಿದ ವಿಧಾನದ ಬಗ್ಗೆ ವಿವರವಾದ ಮಾಹಿತಿ ಕಲೆ ಹಾಕುವಿಕೆ, ಅಂತರ ಕಾಪಾಡುವಿಕೆ ಮತ್ತು ಸರಣಿ ಮುರಿಯುವ ಬಗ್ಗೆ ಆಡಳಿತಕ್ಕೆ ಸೂಕ್ತ ಸಲಹೆ ಸೂಚನೆ ನೀಡುವುದು.

ಈಗಾಗಲೇ ರೋಗಿಗಳಿಗೆ ನೀಡಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದು ಅಗತ್ಯವಿದ್ದಲ್ಲಿ ಬದಲಾವಣೆ ಸೂಚನೆ ನೀಡುವುದು ಸೇರಿದಂತೆ ರೋಗಿಗಳ ಅಧ್ಯಯನ ನಡೆಸಲಿದೆ.

ABOUT THE AUTHOR

...view details